ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡಲು ಬಯಸುವಿರಾ? ನಿಮ್ಮ ನೆರವಿಗಿದೆ ‘ಭಾರತ್ ಕೇ ವೀರ್’

By Suvarna Web DeskFirst Published Apr 9, 2017, 1:08 PM IST
Highlights

ಸಿಆರ್’ಪಿಎಫ್ ಹಾಗೂ ಅರೆ-ಸೇನಾ ಪಡೆಗಳ ಹುತಾತ್ಮ ಯೋಧರ ಕುಟುಂಬಗಳಿಗೆ ಈ ವೆಬ್’ಸೈಟ್ ಮೂಲಕ ಆರ್ಥಿಕ ನೆರವನ್ನು ಒದಗಿಸಬಹುದು. ಈ ಪರಿಹಾರ ನಿಧಿಗೆ ಹಣವನ್ನು ದಾನ ಮಾಡುವ ದಾನಿಗಳಿಗೆ, ತಾವು ಬಯಸುವ ಹುತಾತ್ಮ ಯೋಧರನ್ನು ಆಯ್ಕೆ ಮಾಡಬಹುದಾಗಿದೆ.

ನವದೆಹಲಿ (ಏ.09): ದೇಶಕ್ಕಾಗಿ ವಿವಿಧ ಸಂದರ್ಭಗಳಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವು ಒದಗಿಸಲು ಬಯಸುವವರಿಗೆ ಅನುಕೂಲವಾಗಲು ಸಿದ್ಧಪಡಿಸಿಲಾಗಿರುವ ‘ಭಾರತ್ ಕೇ ವೀರ್’ https://bharatkeveer.gov.in ವೆಬ್’ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್’ಗೆ ಇಂದು ಚಾಲನೆ ನೀಡಲಾಯಿತು.

ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ವೆಬ್’ಸೈಟ್’ಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡಾ ಉಪಸ್ಥಿತರಿದ್ದರು.

Latest Videos

ಸಿಆರ್’ಪಿಎಫ್ ಹಾಗೂ ಅರೆ-ಸೇನಾ ಪಡೆಗಳ ಹುತಾತ್ಮ ಯೋಧರ ಕುಟುಂಬಗಳಿಗೆ ಈ ವೆಬ್’ಸೈಟ್ ಮೂಲಕ ಆರ್ಥಿಕ ನೆರವನ್ನು ಒದಗಿಸಬಹುದು. ಈ ಪರಿಹಾರ ನಿಧಿಗೆ ಹಣವನ್ನು ದಾನ ಮಾಡುವ ದಾನಿಗಳಿಗೆ, ತಾವು ಬಯಸುವ ಹುತಾತ್ಮ ಯೋಧರನ್ನು ಆಯ್ಕೆ ಮಾಡಬಹುದಾಗಿದೆ.

ಎಲ್ಲ ಹುತಾತ್ಮ ಯೋಧರ ಕುಟುಂಬಗಳಿಗೆ ಇದರ ಪ್ರಯೋಜನ ಸಿಗುವಂತಾಗಲು, ರೂ.15 ಲಕ್ಷ ಮಿತಿಯನ್ನು ಇಡಲಾಗಿದೆ. ಒಮ್ಮೆ ಆ ಮಿತಿ ತಲುಪಿದಾಗ ದಾನಿಗಳಿಗೆ ಆ ಬಗ್ಗೆ ಅಲರ್ಟ್ ಕೂಡಾ ಮಾಡುವಂತಹ ವ್ಯವಸ್ಥೆ ಈ ವೆಬ್’ಸೈಟ್’ನಲ್ಲಿದೆ. ಆಗ ದಾನಿಗಳು ಉಳಿದ ಹಣವನ್ನು ಇತರ ಹುತಾತ್ಮ ಯೋಧರ ಖಾತೆಗೆ ಜಮಾಯಿಸಬಹುದಾಗಿದೆ. ನ್ಯಾಷನಲ್ ಇಂಫಾರ್ಮೆಟಿಕ್ಸ್ ಸೆಂಟರ್, ಭಾರತೀಯ ಸ್ಟೇಟ್ ಬ್ಯಾಂಕಿನ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದೆ.  ಕೇವಲ ಎರಡುವರೆ ತಿಂಗಳುಗಳೊಳಗೆ ಈ ವೆಬ್’ಸೈಟನ್ನು ಸಿದ್ದಪಡಿಸಲಾಗಿದೆ.

click me!