
ಮೈಸೂರು(ಸೆ.18): ಸಿಎಂ ತವರಲ್ಲಿ ಮರ್ಯಾದ ಹತ್ಯೆ ಬೆನ್ನತ್ತಿದ ತನಿಖಾ ವರದಿಗೆ ಉತ್ತಮ ವರದಿಗಾರ ಪ್ರಶಸ್ತಿ ಲಭಿಸಿದೆ. ಮೈಸೂರು ವರದಿಗಾರ ರವಿಪಾಂಡವಪುರ ಅವರಿಗೆ ಉತ್ತಮ ವರದಿಗಾರ ಹಾಗೂ ಕ್ಯಾಮೆರಾಮೆನ್ ಪ್ರಮೋದ್ ಪ್ರಭು ಅವರಿಗೆ ಉತ್ತಮ ಕ್ಯಾಮೆರಾಮೆನ್ ಪ್ರಶಸ್ತಿ ನೀಡಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕು ನಾಗಾಪುರ ಹಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಟಿ ಭಾವನ, ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಬೆಜ್ವಾಡ ವಿಲ್ಸನ್, ಪರಿಸರ ಪತ್ರಕರ್ತ ನಾಗೇಶ್ ಹೆಗ್ಡೆ ಪ್ರಶಸ್ತಿ ವಿತರಿಸಿದರು. 2013-14 ನೇ ಸಾಲಿನಲ್ಲಿಯೂ ಅಮ್ಮಂದಿರ ದಿನದ ವಿಶೇಷ ವರದಿಗೆ ಉತ್ತಮ ವರದಿಗಾರ ಪ್ರಶಸ್ತಿ ಲಭಿಸಿತ್ತು. ರವಿಪಾಂಡವಪುರ ಎರಡನೇ ಬಾರಿಗೆ ಉತ್ತಮ ವರದಿಗಾರ ಪ್ರಶಸ್ತಿ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.