ಅನಾಥ ಶವಕ್ಕೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್ರು..!

Published : Aug 03, 2019, 07:59 PM ISTUpdated : Aug 03, 2019, 09:23 PM IST
ಅನಾಥ ಶವಕ್ಕೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್ರು..!

ಸಾರಾಂಶ

ಪೊಲೀಸ್ರು ಅಂದ್ರೆ ಕೆಟ್ಟವರು, ಮಾನವೀಯತೆ ಇಲ್ಲವಾದರೂ ಎಂದು ಎಲ್ಲರು ಹೇಳುತ್ತಾರೆ. ಹೌದು. ಸಾಮಾನ್ಯವಾಗಿ ಪೊಲೀಸರು ಅಂದಕೂಡಲೇ ಎಲ್ಲರಿಗೂ ಅದೇ ನೆನಪಾಗುತ್ತದೆ. ಆದ್ರೆ ಅದರಲ್ಲೂ ಕೆಲವರು ಒಳ್ಳೆಯವರು ಇರುತ್ತಾರೆ ನನ್ನೊಂದು, ಈ ರೀತಿಯ ಒಳ್ಳೆಯ ಕೆಲಸ ಮಾಡಿದಾಗ ಮಾತ್ರ ಗೊತ್ತಾಗುತ್ತದೆ. ಅಂತಹದೊಂದು ಕೆಲಸವನ್ನು ಬೆಂಗಳೂರು ಪೊಲೀಸರು ಮಾಡಿದ್ದಾರೆ. ಅಷ್ಟಕ್ಕೂ ಬೆಂಗ್ಳೂರು ಪೊಲೀಸ್ರು ಮಾಡಿದ್ದಾದರೂ ಏನು ಅಂತೀರಾ..? ಮುಂದೆ ಓದಿ.

ಬೆಂಗಳೂರು [ಆ.03]: ಮನುಷ್ಯನ ಹುಟ್ಟು ಸಾವು ಪ್ರಕೃತಿಯ ಸಹಜ ಗುಣ. ಅದೇ ರೀತಿ ಸತ್ತವರಿಗೆ ನಮ್ಮಲ್ಲಿ ಹಲವು ಶಾಸ್ತ್ರ ಹಾಗೂ ಸಂಪ್ರದಾಯದಿಂದ ಮೋಕ್ಷ ಸಿಗುವಂತೆ ಮಾಡುತ್ತಾರೆ. 

ಹೌದು, ಯಾಕಂದ್ರೆ ಆತ್ಮಕ್ಕೆ ಮುಕ್ತಿ ಸಿಗದೇ ಇದ್ದರೇ, ಪ್ರೇತಾತ್ಮಗಳಾಗಿ ಅಲೆಯುತ್ತಾರೆ ಅನ್ನೋದು ಜನರ ನಂಬಿಕೆ. ಹಾಗಾಗಿ ನಮ್ಮಲ್ಲಿ ಸತ್ತವರಿಗೆ ಆಯಾ ಧರ್ಮದಂತ ಅನ್ವಯದಂತೆ ವಿಧಿವಿಧಾನಗಳ ಮೂಲಕ ಮೋಕ್ಷ ದೊರಕುವಂತೆ ಮಾಡುತ್ತಾರೆ. 

ಆದರೆ, ಕೆಲವರು ಬೀದಿಯಲ್ಲಿ ಬಿದ್ದು ಸಾಯುತ್ತಾರೆ. ಅಂಥವರಿಗೆ ಯಾವುದೇ ಶಾಸ್ತ್ರ, ಪೂಜೆಗಳಿರುವುದಿಲ್ಲ. ಅದೇ ರೀತಿ ಇಲ್ಲೊಂದು ಅನಾಥವಾಗಿ ಬಿದ್ದಿದ್ದ ಶವಕ್ಕೆ ಪೊಲೀಸರು ಮುಕ್ತಿ ಸಿಗುವಂತೆ ಮಾಡಿದ್ದಾರೆ.

ಮಣಿ [61) ಎಂಬಾತ ಸಹಜ ಸಾವಿಗೀಡಾಗಿದ್ದು, ಈತನಿಗೆ ಹಿಂದೆ-ಮುಂದೆ ಅಂತ ಯಾರು ಇಲ್ಲ. ಇದರಿಂದ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಅನಾಥ ಶವದ ಅಂತ್ಯಸಂಸ್ಕಾರ ಮಾಡಿದ್ದಾರೆ. 

ಇಂದು [ಶನಿವಾರ] ನಂದಿನಿ ಲೇಔಟ್ ಇನ್ಸ್ ಪೆಕ್ಟರ್ ಲೋಹಿತ್ ಅವರು ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕುಟುಂಬದ ಸದಸ್ಯನಂತೆ ಇನ್ಸ್ ಪೆಕ್ಟರ್ ಲೋಹಿತ್ ಅವರು ಶವಕ್ಕೆ ಹೂವಿನ ಹಾರ ಹಾಕಿ, ಊದುಬತ್ತಿ ಹಚ್ಚಿ ಜತೆಗೆ ಟೆಂಗಿನ ಕಾಯಿ ಹೊಡೆದು ಪುಜೆ ಪುನಸ್ಕಾರದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್