
ಬೆಂಗಳೂರು (ಜು. 06): ಉದ್ಯಾನ ನಗರಿಯ ಹಲವೆಡೆ ತುಂತುರು ಹಾಗೂ ವಿವಿಧೆಡೆ ಶುಕ್ರವಾರ ಹಗುರ ಮಳೆಯಾಗಿದೆ. ಇದರಿಂದ ಆರಂಭದಿಂದಲೂ ಮೋಡ ಕವಿದ ವಾತಾವರಣದಲ್ಲಿದ್ದ ಮುಂಗಾರು ಇದೀಗ ನಗರದಲ್ಲೂ ಮಳೆಯ ಸಿಂಚನ ಆರಂಭ ಆದಂತಾಗಿದೆ.
ಮುಂದಿನ ಮೂರ್ನಾಲ್ಕು ದಿನಗಳ ಕಾಲ ನಗರದಲ್ಲೂ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ. ಶುಕ್ರವಾರ ಬೆಳಗ್ಗೆಯಿಂದಲೇ ನಗರದಲ್ಲಿ ದಟ್ಟ ಮೋಟಗಳ ವಾತಾವಾರಣ ಕಂಡುಬಂದಿತ್ತು. ಸಂಜೆ ಹಾಗೂ ರಾತ್ರಿ ನಗರದ ಹೃದಯ ಭಾಗ ಹಾಗೂ ದಕ್ಷಿಣ ಭಾಗದ ವಿವಿಧ ಪ್ರದೇಶಗಳಲ್ಲಿ ಹಗುರ ಹಾಗೂ ಹೊರವಲಯದ ಹಲವೆಡೆ ತುಂತುರು ಮಳೆಯಾಗಿದೆ. ಅಗ್ರಹಾರ ದಾಸರಹಳ್ಳಿಯಲ್ಲಿ 6 ಮಿ.ಮೀ., ಚಾಮರಾಜಪೇಟೆಯಲ್ಲಿ 5.5 ಸಂಪಂಗಿ ರಾಮನಗರ 4.5 ಕೊಡಿಗೇಹಳ್ಳಿಯಲ್ಲಿ 3.5 ಮಿ.ಮೀ ಮಳೆ ಬಿದ್ದಿದೆ.
ಇನ್ನು ಕೊಟ್ಟಿಗೆಪಾಳ್ಯ, ನಾಗರಬಾವಿ, ರಾಜ ರಾಜೇಶ್ವರಿ ನಗರ, ಹೆಮ್ಮಿಗೇಪುರ, ರಾಮೋಹಳ್ಳಿ, ಎಚ್ಎ ಎಲ್, ಕೋಣನಕುಂಟೆ, ಬನಶಂಕರಿ, ಬಾಗಲೂರು, ದೊಡ್ಡ ನೆಕ್ಕುಂದಿ, ಎಚ್ಎಸ್.ಆರ್. ಲೇಔಟ್ ಸೇರಿದಂತೆ ವಿವಿಧೆಡೆ ಕನಿಷ್ಠ 1 ಮಿ.ಮೀ.ನಿಂದ 2.5 ಮಿ.ಮೀ. ವರೆಗೆ ಮಳೆ ಬಿದ್ದಿದೆ. ಇನ್ನೂ ಕೆಲ ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಮುಂದಿನ 3-4 ದಿನಗಳ ಕಾಲ ನಗರದಲ್ಲೂ ಮುಂಗಾರು ಮಳೆ ಕೊಂಚ ಬಿರುಸಾಗಲಿದೆ. ಬಹುತೇಕ ಭಾಗಗಳಲ್ಲಿ ಸಾಧಾರಣ ಹಾಗೂ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.