ಇನ್ನು 21 ದಿನಗಳ ಕಾಲ ನಲಪಾಡ್ ಜೈಲಿನಲ್ಲಿ ?

Published : Mar 04, 2018, 01:40 PM ISTUpdated : Apr 11, 2018, 12:42 PM IST
ಇನ್ನು 21 ದಿನಗಳ ಕಾಲ ನಲಪಾಡ್ ಜೈಲಿನಲ್ಲಿ ?

ಸಾರಾಂಶ

ಈ ಪ್ರಕರಣದಲ್ಲಿ ಜಾಮೀನು ಸಿಗದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರು ವಿರುದ್ಧ ಮುಖ್ಯ ಸಾಕ್ಷ್ಯ ಆಗಿರುವ ವೈದ್ಯಕೀಯ ವರದಿ ಕಠಿಣ ಸ್ವರೂಪವಾಗಲಿದೆ.

ಬೆಂಗಳೂರು(ಮಾ.04): ಇತ್ತೀಚಿಗೆ ಬೆಂಗಳೂರಿನ ಯುಬಿ ಸಿಟಿಯಲ್ಲಿ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ತಂಡದಿಂದ ದಬ್ಬಾಳಿಕೆ ತುತ್ತಾಗಿರುವ ವಿದ್ವತ್ ಅವರು 21 ದಿನಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದರೆ ಆರೋಪಿಗಳು ಕಾನೂನಾತ್ಮಕವಾಗಿ ಮತ್ತಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ.

ಹೀಗಾಗಿ ಅವರ ಕುಟುಂಬಸ್ಥರು ವಿದ್ವತ್ ಚಿಕಿತ್ಸೆ ಮುಂದುವರೆಸಲು ಯತ್ನಿಸಿದರೆ, ಅವರನ್ನು ಆಸ್ಪತ್ರೆಯಿಂದ ಶೀಘ್ರ ಬಿಡುಗಡೆಯಾಗುವಂತೆ ಒತ್ತಡ ಹೇರುವ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.ಈ ಪ್ರಕರಣದಲ್ಲಿ ಜಾಮೀನು

ಸಿಗದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರು ವಿರುದ್ಧ ಮುಖ್ಯ ಸಾಕ್ಷ್ಯ ಆಗಿರುವ ವೈದ್ಯಕೀಯ ವರದಿ ಕಠಿಣ ಸ್ವರೂಪವಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ವತ್ ಅವರನ್ನು ತ್ವರಿತವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಪ್ರಯತ್ನ ನಡೆದಿವೆ ಎನ್ನಲಾಗುತ್ತಿದೆ. ಈಗಾಗಲೇ ವಿದ್ವತ್ ಆಸ್ಪತ್ರೆಯಲ್ಲಿದ್ದು 2 ವಾರ ಆಗಿದ್ದು, ಇನ್ನೊಂದು ವಾರ ಇದ್ದರೆ 21 ದಿನ ಆಗಲಿದೆ.

ಹಲ್ಲೆ ಅಥವಾ ಕೊಲೆ ಯತ್ನ ಕೃತ್ಯಗಳಲ್ಲಿ ಆಸ್ಪತ್ರೆಯಲ್ಲೇ ಗಾಯಾಳು 21 ದಿನ ಚಿಕಿತ್ಸೆ ಪಡೆದರೆ ಪ್ರಕರಣದ ಸ್ವರೂಪ ಬದಲಾಗಲಿದೆ. ಆಗ ಐಪಿಸಿ 326 ರಡಿ ಪ್ರಕರಣ ದಾಖಲಾಗಲಿದ್ದು, ಇದು ಗಂಭೀರ ಅಪರಾದ ಕೃತ್ಯ ಎಂದು ಪರಿಗಣಿತ

ವಾಗುತ್ತದೆ. ಹೀಗಾಗಿ ಗಾಯಾಳು ಮೂರು ವಾರಗಳ ಮುನ್ನ ಆಸ್ಪತ್ರೆಯಿಂದ ಬಿಡುಗಡೆಯಾದರೆ ಆ ಸೆಕ್ಷನ್ ಅನ್ವಯವಾಗುವುದಿಲ್ಲ. ಈಗ ವಿದ್ವತ್ ಮೇಲಿನ ಹಲ್ಲೆ ಕೃತ್ಯ ಸಂಬಂಧ 307 ರಡಿ ಪ್ರಕರಣ ದಾಖಲಾಗಿದೆ. ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಕಾರಣ ಮುಂದಿನ ತನಿಖಾ ಹಂತದಲ್ಲಿ 326 ರಡಿ ಸೆಕ್ಷನ್ ಸೇರಿಸಬಹುದಾಗಿದೆ.

ಇನ್ನೂ ಐಪಿಸಿ 326ರಡಿ ಪ್ರಕರಣದ ದಾಖಲಾದರೆ ಗಾಯಾಳು ಮೇಲೆ ತೀವ್ರ ರೀತಿ ಪೆಟ್ಟಾಗಿದೆ ಎಂದೇ ವೈದ್ಯಕೀಯ ವರದಿ ನೀಡಲಿದ್ದಾರೆ. ಇದರಿಂದ ಆರೋಪಿಗಳ ವಿರುದ್ಧ ಸಾಕ್ಷ್ಯಗಳು ಕಾನೂನಾತ್ಮಕವಾಗಿ ಬಿಗಿಯಾಗಲಿದೆ. ಅಲ್ಲದೆ ಕೃತ್ಯ ಕುರಿತು ತನಿಖಾಧಿಕಾರಿಗಳಿಗೆ ಗಾಯಾಳು ಹೇಳಿಕೆ ನೀಡಿದರೂ ಸಹ ಆತ 21 ದಿನಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಿದರೆ ಸಂಕಷ್ಟ ತಪ್ಪಿದ್ದಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫರ್ಜಿ ಕೆಫೆಯಲ್ಲಿ ಫೆ.18 ರಂದು ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರು ಗೂಂಡಾಗಿರಿ ನಡೆಸಿದ್ದರು. ಈ ಕೃತ್ಯ ನಡೆದ ಎರಡು ವಾರ ಕಳೆದಿದ್ದು, ಇನ್ನೂ ಕೆಲವು ದಿನ ವಿದ್ವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಿದರೆ ಪ್ರಕರಣವು ಕಾನೂನಾತ್ಮಕವಾಗಿ ಗಂಭೀರ ಸ್ವರೂಪ ಪಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

--

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!