
ಬೆಂಗಳೂರು, [ಅ.20]: ಜಯಕರ್ನಾಟಕ ಸಂಘಟನೆಯ ಸಂಸ್ಥಾನಪಕ, ಮಾಜಿ ಡಾನ್ ಮುತ್ತಪ್ಪ ರೈ ಅವರು ಹಲವು ವರ್ಷಗಳ ಬಳಿಕ ಇಂದು [ಶನಿವಾರ] ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಅಪರಿಚಿತರೊಬ್ಬ ಮಾಡಿದ ಸಣ್ಣ ಯಡವಟ್ಟಿನಿಂದ ಇಂದು ಮುತ್ತಪ್ಪ ರೈ ಪೊಲೀಸ್ ಮೆಟ್ಟಿಲೇರಬೇಕಾಯಿತು. ಅಷ್ಟಕ್ಕೂ ಮುತ್ತಪ್ಪ ರೈ ಪೊಲೀಸ್ ಮೆಟ್ಟಿಲೇರಲು ಬೇರೆ ಯಾರು ಅಲ್ಲ ಒಬ್ಬ ಅರ್ಚಕ.
ಎಲ್ಲಾ ಎತ್ಕೊಂಡ್ ಸ್ಟೇಷನ್ ಗೆ ಬನ್ನಿ: ಆಯುಧ ಪೂಜೆ ಮಾಡಿದ್ದ ಮುತ್ತಪ್ಪ ರೈಗೆ ಸಂಕಷ್ಟ!
ಹೌದು, ಮುತ್ತಪ್ಪ ರೈ ಅವರು ಮೊನ್ನೇ ಆಯುಧ ಪೂಜೆ ದಿನದಂದು ಪೂಜೆ ಮಾಡಲು ಅರ್ಚಕರನ್ನ ಕರೆಯಿಸಿದ್ದರು. ಈ ವೇಳೆ ಅರ್ಚಕರ ಜೊತೆ ಬಂದಿದ್ದ ಸಹಾಯಕ ಅರ್ಚಕರೊಬ್ಬರು ಆಯುಧಗಳ ಜೊತೆ ಮುತ್ತಪ್ಪ ರೈಇದ್ದ ಫೋಟೋ ತೆಗೆದಿದ್ದಾನೆ.
ಬಳಿಕ ಆ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದು, ಫೋಟೋ ಫುಲ್ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಆಯುಧಗಳ ಸಮೇತ ಹಾಜರಾಗುವಂತೆ ಮುತ್ತಪ್ಪ ರೈಗೆ ನೋಟಿಸ್ ನೀಡಿದ್ದಾರೆ.
ಇದರ ಅನ್ವಯ ಇಂದು ಮುತ್ತಪ್ಪ ರೈ ಸಿಸಿಬಿ ಮುಂದೆ ಹಾಜರಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.