ಆಯುಧ ಪೂಜೆಯಂದು ಮುತ್ತಪ್ಪ ರೈಗೆ ಅಪರಿಚಿತ ತಂದ ಆಪತ್ತು: ಯಾರವರು?

By Web DeskFirst Published Oct 20, 2018, 5:20 PM IST
Highlights

ಇದು ಮುತ್ತಪ್ಪ ರೈಗೆ ಅಪರಿಚಿತ ತಂದ ಅಪತ್ತು. ಮಾಜಿ ಡಾನ್ ಮುತ್ತಪ್ಪ ರೈಗೆ ಸಂಕಷ್ಟ ತಂದಿದ್ದು ಯಾರು ಗೊತ್ತಾ..? ಹಲವು ವರ್ಷಗಳ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಮುತ್ತಪ್ಪ ರೈ. ಇದಕ್ಕೆ ಕಾರಣ ಯಾರು? ಇಲ್ಲಿದೆ ಡಿಟೇಲ್ಸ್

ಬೆಂಗಳೂರು, [ಅ.20]: ಜಯಕರ್ನಾಟಕ ಸಂಘಟನೆಯ ಸಂಸ್ಥಾನಪಕ, ಮಾಜಿ ಡಾನ್ ಮುತ್ತಪ್ಪ ರೈ ಅವರು ಹಲವು ವರ್ಷಗಳ ಬಳಿಕ ಇಂದು [ಶನಿವಾರ] ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅಪರಿಚಿತರೊಬ್ಬ ಮಾಡಿದ ಸಣ್ಣ ಯಡವಟ್ಟಿನಿಂದ ಇಂದು ಮುತ್ತಪ್ಪ ರೈ ಪೊಲೀಸ್ ಮೆಟ್ಟಿಲೇರಬೇಕಾಯಿತು. ಅಷ್ಟಕ್ಕೂ ಮುತ್ತಪ್ಪ ರೈ ಪೊಲೀಸ್ ಮೆಟ್ಟಿಲೇರಲು ಬೇರೆ ಯಾರು ಅಲ್ಲ ಒಬ್ಬ ಅರ್ಚಕ. 

ಎಲ್ಲಾ ಎತ್ಕೊಂಡ್ ಸ್ಟೇಷನ್ ಗೆ ಬನ್ನಿ: ಆಯುಧ ಪೂಜೆ ಮಾಡಿದ್ದ ಮುತ್ತಪ್ಪ ರೈಗೆ ಸಂಕಷ್ಟ!

ಹೌದು, ಮುತ್ತಪ್ಪ ರೈ ಅವರು ಮೊನ್ನೇ ಆಯುಧ ಪೂಜೆ ದಿನದಂದು ಪೂಜೆ ಮಾಡಲು ಅರ್ಚಕರನ್ನ ಕರೆಯಿಸಿದ್ದರು. ಈ ವೇಳೆ ಅರ್ಚಕರ ಜೊತೆ ಬಂದಿದ್ದ ಸಹಾಯಕ ಅರ್ಚಕರೊಬ್ಬರು ಆಯುಧಗಳ ಜೊತೆ ಮುತ್ತಪ್ಪ ರೈಇದ್ದ ಫೋಟೋ ತೆಗೆದಿದ್ದಾನೆ.

ಬಳಿಕ ಆ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದು, ಫೋಟೋ ಫುಲ್ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಆಯುಧಗಳ ಸಮೇತ ಹಾಜರಾಗುವಂತೆ ಮುತ್ತಪ್ಪ ರೈಗೆ ನೋಟಿಸ್ ನೀಡಿದ್ದಾರೆ.  

ಇದರ ಅನ್ವಯ ಇಂದು ಮುತ್ತಪ್ಪ ರೈ ಸಿಸಿಬಿ ಮುಂದೆ ಹಾಜರಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

click me!