ಚೇತನ್‌ ಭಗತ್‌ ವಿರುದ್ಧ ಬೆಂಗಳೂರು ಲೇಖಕಿಯಿಂದ ಕೃತಿಚೌರ್ಯ ಆಪಾದನೆ

Published : Apr 26, 2017, 08:09 AM ISTUpdated : Apr 11, 2018, 01:06 PM IST
ಚೇತನ್‌ ಭಗತ್‌ ವಿರುದ್ಧ ಬೆಂಗಳೂರು ಲೇಖಕಿಯಿಂದ ಕೃತಿಚೌರ್ಯ ಆಪಾದನೆ

ಸಾರಾಂಶ

ಚೇತನ್‌ರ ನೂತನ ಪುಸ್ತಕ ‘ಒನ್‌ ಇಂಡಿಯನ್‌ ಗಲ್‌ರ್‍' ವಿರುದ್ಧ ಕೃತಿಚೌರ್ಯದ ಆಪಾದನೆ ಕೇಳಿಬಂದಿದೆ. ಚೇತನ್‌ ಈ ಆಪಾದನೆಗಳನ್ನು ತಳ್ಳಿ ಹಾಕಿದ್ದಾರಾದರೂ, ಬೆಂಗಳೂರು ಕೋರ್ಟ್‌ ತಡೆ ನೀಡಿದೆ. ಐಐಟಿ ಮತ್ತು ಐಐಎಂ ಪದವೀಧರೆ ಅನ್ವಿತಾ ಬಾಜ್‌ಪಾಯ್‌ ಎಂಬವರು ಈ ಪ್ರಕರಣ ದಾಖಲಿಸಿದ್ದರು.

ನವದೆಹಲಿ: ಖ್ಯಾತ ಲೇಖಕ ಚೇತನ್‌ ಭಗತ್‌ರ ಭಾರೀ ಮಾರಾಟವಾಗುತ್ತಿರುವ ನೂತನ ಪುಸ್ತಕವೊಂದರ ಬಗ್ಗೆ ಬೆಂಗಳೂರು ಮೂಲದ ಲೇಖಕಿಯೊಬ್ಬರು ಕೃತಿಚೌರ್ಯ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ, ಪುಸ್ತಕವನ್ನು ದೆಹಲಿ ವಿಶ್ವವಿದ್ಯಾಲಯದ ಪುಸ್ತಕದ ಭಾಗವನ್ನಾಗಿ ಮಾಡುವುದಕ್ಕೆ ಬೆಂಗಳೂರಿನ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಚೇತನ್‌ರ ನೂತನ ಪುಸ್ತಕ ‘ಒನ್‌ ಇಂಡಿಯನ್‌ ಗಲ್‌ರ್‍' ವಿರುದ್ಧ ಕೃತಿಚೌರ್ಯದ ಆಪಾದನೆ ಕೇಳಿಬಂದಿದೆ. ಚೇತನ್‌ ಈ ಆಪಾದನೆಗಳನ್ನು ತಳ್ಳಿ ಹಾಕಿದ್ದಾರಾದರೂ, ಬೆಂಗಳೂರು ಕೋರ್ಟ್‌ ತಡೆ ನೀಡಿದೆ. ಐಐಟಿ ಮತ್ತು ಐಐಎಂ ಪದವೀಧರೆ ಅನ್ವಿತಾ ಬಾಜ್‌ಪಾಯ್‌ ಎಂಬವರು ಈ ಪ್ರಕರಣ ದಾಖಲಿಸಿದ್ದರು.

ತಾವು 2014ರ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಚೇತನ್‌ರಿಗೆ ಉಡುಗೊರೆಯಾಗಿ ನೀಡಿದ್ದ ‘ಲೈಫ್‌, ಓಡ್ಸ್‌ ಆ್ಯಂಡ್‌ ಎಂಡ್ಸ್‌' ಎಂಬ ಕೃತಿಯಲ್ಲಿರುವ ಪಾತ್ರ, ಸ್ಥಳ ಮತ್ತು ಭಾವನಾತ್ಮಕ ಹರಿವುಗಳನ್ನು ಅವರು ಕೃತಿಚೌರ್ಯ ನಡೆಸಿದ್ದಾರೆ ಎಂದು ಅನ್ವಿತಾ ಆಪಾದಿಸಿದ್ದಾರೆ. ತಾತ್ಕಾಲಿಕ ತಡೆಯಾಜ್ಞೆ ನೀಡಿರುವುದನ್ನು ಅನ್ವಿತಾ ದೃಢಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ