ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ'ನಲ್ಲಿ ಹೋರಾಟ ನಡೆಸಿದ್ದ ಮಹಿಳೆಯ ಮಕ್ಕಳು ನಾಪತ್ತೆ

Published : Aug 31, 2017, 08:42 PM ISTUpdated : Apr 11, 2018, 12:46 PM IST
ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ'ನಲ್ಲಿ ಹೋರಾಟ ನಡೆಸಿದ್ದ ಮಹಿಳೆಯ ಮಕ್ಕಳು ನಾಪತ್ತೆ

ಸಾರಾಂಶ

ಸುಪ್ರೀಂ ಕೋರ್ಟ್'ನಲ್ಲಿ ಆಗಸ್ಟ್ 22 ರಂದು ತ್ರಿವಳಿ ತಲಾಖ್ ವಿರುದ್ಧ ತೀರ್ಪು ಬಂದ ನಂತರ  ತನ್ನ ಮಾಜಿ ಪತಿ ಮುರ್ತಾಜಾ ಅನ್ಸಾರಿ ಹಾಗೂ ಆತನ ಅತ್ತಿಗೆ ನನ್ನನ್ನು ಮನೆಯಿಂದ ಓಡಿಸಲು ಯತ್ನಿಸುತ್ತಿದ್ದಾರೆ. ಇಬ್ಬರ ವಿರುದ್ಧವೂ ಇಶ್ರಾತ್ ಜಹಾನ್ ಗೋಲ್'ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಕೋಲ್ಕತ್ತಾ(ಆ.31): ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್'ನಲ್ಲಿ ಹೋರಾಟ ನಡೆಸಿ ಜಯಿಸಿದ್ದ ಮಹಿಳೆ ಇಶ್ರಾತ್ ಜಹಾನ್ ಇಬ್ಬರು ಅಪ್ರಾಪ್ತ ಮಕ್ಕಳು ನಾಪತ್ತೆಯಾಗಿದ್ದು, ತನ್ನ ಮಾಜಿ ಪತಿಯೇ ಮಕ್ಕಳ ಅಪಹರಣಕ್ಕೆ ಕಾರಣ ಎಂದು ಆರೋಪಿಸಿದ್ದಾಳೆ.

ಸುಪ್ರೀಂ ಕೋರ್ಟ್'ನಲ್ಲಿ ಆಗಸ್ಟ್ 22 ರಂದು ತ್ರಿವಳಿ ತಲಾಖ್ ವಿರುದ್ಧ ತೀರ್ಪು ಬಂದ ನಂತರ  ತನ್ನ ಮಾಜಿ ಪತಿ ಮುರ್ತಾಜಾ ಅನ್ಸಾರಿ ಹಾಗೂ ಆತನ ಅತ್ತಿಗೆ ನನ್ನನ್ನು ಮನೆಯಿಂದ ಓಡಿಸಲು ಯತ್ನಿಸುತ್ತಿದ್ದಾರೆ. ಇಬ್ಬರ ವಿರುದ್ಧವೂ ಇಶ್ರಾತ್ ಜಹಾನ್ ಗೋಲ್'ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಇಶ್ರಾತ್ ಹೌರಾ ಪಟ್ಟಣದ ಪಿಲ್'ಖಾನಾ ಪ್ರದೇಶದಲ್ಲಿ ಪುತ್ರ  ಶೈಸ್ತಾ ಕಟೂನ್(13), ಪುತ್ರ ಜಾಹಿದ್ ಆಲಂ(7) ಜೊತೆ ವಾಸಿಸುತ್ತಿದ್ದಾಳೆ. ಇಬ್ಬರು ಬೆಳಿಗ್ಗೆ ಮನೆಯಿಂದ ವಾಪಸ್ ಹೋದವರು ಮನೆಗೆ ಹಿಂತಿರುಗಿಲ್ಲ. ತನ್ನ ಮಾಜಿ ಪತಿ ದುಬೈ'ನಲ್ಲಿ ವಾಸಿಸುತ್ತಿದ್ದು ಆತನ 2ನೇ ಪತ್ನಿ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದಾಳೆ. ತನ್ನ ಮಕ್ಕಳ ಅಪಹರಣದಲ್ಲಿ ನನ್ನ ಅತ್ತಿಗೆ ಜುಬೀನಾ ಖಾನ್ ಹಾಗೂ ಆಕೆಯ ಪತಿ ಮುಸ್ತಾಫಾ ಅನ್ಸಾರಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ತ್ರಿವಳಿ ತಲಾಖ್ ಪ್ರಕರಣದಲ್ಲಿ ಈ ಕೆಯ ಪರ ವಾದಿಸಿದ್ದ ವಕೀಲ ನಾಜಿಯಾ ಇಲೈ ಖಾನ್ ಕೂಡ ದೂರು ನೀಡುವ ಸಂದರ್ಭದಲ್ಲಿ ಠಾಣೆಯಲ್ಲಿ ಉಪಸ್ಥಿತರಿದ್ದರು. ಜಹಾನ್ ಪತಿ 2014ರ ಏಪ್ರಿಲ್'ನಲ್ಲಿ ದುಬೈ'ನಿಂಲೇ ಫೋನಿನ ಮೂಲಕವೇ ತ್ರಿವಳಿ ತಲಾಖ್ ಮೂಲಕ ವಿಚ್ಚೇದನ ನೀಡಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್