ರಾಜೀನಾಮೆ ಪರ್ವದ ನಡುವೆ ಪೊಲೀಸ್ ವಶಕ್ಕೆ ಕಾಂಗ್ರೆಸ್ ಶಾಸಕ

By Web DeskFirst Published Jul 1, 2019, 4:57 PM IST
Highlights

ರಾಜೀನಾಮೆ ಪರ್ವ ದೋಸ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ ಇತ್ತ ಮತ್ತೊಬ್ಬ ಶಾಸಕರು ಪೊಲೀಸರ ವಿಚಾರಣೆ ಎದುರಿಸಬೇಕಾಗಿ ಬಂದಿದೆ.

ಬೆಂಗಳೂರು[ಜು. 01]  ಒಂದು ಕಡೆ ರಾಜೀನಾಮೆ ಪರ್ವ ದೋಸ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿದ್ದರೆ ಇತ್ತ ಶಾಸಕ ನಾಗೇಂದ್ರ ಅಕ್ರಮ ಗಣಿಗಾರಿಕೆ ಆರೋಪದಡಿ ಪೊಲೀಸರ ವಶ ಸೇರಬೇಕಾಗಿದೆ.

ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣಕ್ಕೆ ಜನಪ್ರತಿನಿಧಿಗಳ ನ್ಯಾಯಾಲಯ ನಾಗೇಂದ್ರ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಖಾಸಗಿ ದೂರು ದಾಖಲಾಗಿದ್ದ ಪ್ರಕರಣದಲ್ಲಿ ನಾಗೇಂದ್ರ ಕೋರ್ಟಿಗೆ ಹಾಜರಾಗಿರಲಿಲ್ಲ.

ದೋಸ್ತಿಗೆ ಮರೆಯಾದ ಆನಂದ, ರಮೇಶ್ ಜಾರಕಿಹೊಳಿ ರಾಜೀನಾಮೆ

ಬೆಳಗ್ಗೆ ಆನಂದ್ ಸಿಂಗ್  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ಜುಲೈ 2 ರಂದು ರಾಜೀನಾಮೆ ನೀಡುವುದುದಾಗಿ ರಮೇಶ್ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ಈ ನಡುವೆ ಶಾಸಕರೊಬ್ಬರು ಪೊಲೀಸರ ವಿಚಾರಣೆ ಎದುರಿಸಬೇಕಾಗಿದೆ.

 

 


 

click me!