ಇರ್ಫಾನ್' ಪಠಾಣ್'ಗೆ ಶಾಕ್ ನೀಡಿದ ಬಿಸಿಸಿಐ: ನಿರಾಕ್ಷೇಪಣ ಪತ್ರ ರದ್ದು !

Published : May 21, 2017, 03:47 PM ISTUpdated : Apr 11, 2018, 01:01 PM IST
ಇರ್ಫಾನ್' ಪಠಾಣ್'ಗೆ ಶಾಕ್ ನೀಡಿದ ಬಿಸಿಸಿಐ: ನಿರಾಕ್ಷೇಪಣ ಪತ್ರ ರದ್ದು !

ಸಾರಾಂಶ

ಇರ್ಫಾನ್' ಪಠಾಣ್'ಗೆ ಶಾಕ್ ನೀಡಿದ ಬಿಸಿಸಿಐ: ನಿರಾಕ್ಷೇಪಣ ಪತ್ರ ರದ್ದು !

ಮುಂಬೈ(ಮೇ.21): ಭಾರತದ ಆಲ್ರೌಂಡರ್‌ ಇರ್ಫಾನ್‌ ಪಠಾಣ್‌ಗೆ 2017ರ ಬಹರೇನ್‌ ಕ್ರಿಕೆಟ್‌ ಹಬ್ಬ ಪ್ರದರ್ಶನ ಟಿ20 ಪಂದ್ಯದಲ್ಲಿ ಆಡಲು ನೀಡಿದ್ದ ನಿರಾಕ್ಷೇಪಣ ಪತ್ರವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆ ಘಳಿಗೆಯಲ್ಲಿ ಹಿಂಪಡೆದ ಘಟನೆ ಬೆಳಕಿಗೆ ಬಂದಿದೆ. ಪಂದ್ಯದಲ್ಲಿ ಭಾಗವಹಿಸಲೆಂದು ಪಠಾಣ್‌, ಬಹರೇನ್‌ಗೆ ತೆರಳಿದ್ದರು. ಅಷ್ಟೇ ಅಲ್ಲ, ಪತ್ರಿಕಾ ಗೋಷ್ಠಿಯಲ್ಲೂ ಪಾಲ್ಗೊಂಡಿದ್ದರು. ಆದರೆ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಅನಿರ್ದಿಷ್ಟಕಾರಣಗಳನ್ನು ನೀಡಿ ಬಿಸಿಸಿಐ ಅವರಿಗೆ ಅನುಮತಿ ನಿರಾಕರಿಸಿದೆ. 
ಇರ್ಫಾನ್‌ ಪಠಾಣ್‌ ತಮ್ಮ ಹೆಸರಿನಲ್ಲಿ ರಚಿಸಲಾಗಿದ್ದ ಇರ್ಫಾನ್‌ ಫ್ಯಾಲ್ಕನ್ಸ್‌ ತಂಡವನ್ನು ಮಿಸ್ಬಾ ಉಲ್‌ ಹಕ್‌ ಈಗಲ್ಸ್‌ ತಂಡದ ವಿರುದ್ಧ ಮುನ್ನಡೆಸಬೇಕಿತ್ತು. ಪಠಾಣ್‌ ಆಡದ ಕಾರಣ, ವೆಸ್ಟ್‌ಇಂಡೀಸ್‌ನ ಬ್ಯಾಟ್ಸ್‌ಮನ್‌ ಮರ್ಲಾನ್‌ ಸ್ಯಾಮುಯಲ್ಸ್‌, ಫ್ಯಾಲ್ಕನ್ಸ್‌ ತಂಡಕ್ಕೆ ನಾಯಕರಾದರು.
ಬಿಸಿಸಿಐ ಈ ರೀತಿ ಮಾಡುತ್ತಿರುವುದು ಇದು ಮೊದಲೇನಲ್ಲ. ಇದೇ ವರ್ಷ ಫೆಬ್ರವರಿ ವೇಳೆ ಹಾಂಕಾಂಗ್‌ ಟಿ20 ಪಂದ್ಯಾವಳಿಯಲ್ಲಿ ಭಾಗವಹಿಸಲು ಇರ್ಫಾನ್‌ರ ಸಹೋದರ ಯೂಸುಫ್‌ ಪಠಾಣ್‌ಗೆ ನೀಡಿದ್ದ ನಿರಾಕ್ಷೇಪಣ ಪತ್ರವನ್ನು ಬಿಸಿಸಿಐ, ಕೊನೆ ಕ್ಷಣದಲ್ಲಿ ಹಿಂಪಡೆದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌