ಬಸವಣ್ಣ, ಬುದ್ಧ  ಕೂಡ ಎಡಪಂಥೀಯರು: ಚಂಪಾ

Published : Oct 23, 2017, 04:41 PM ISTUpdated : Apr 11, 2018, 01:05 PM IST
ಬಸವಣ್ಣ, ಬುದ್ಧ  ಕೂಡ ಎಡಪಂಥೀಯರು: ಚಂಪಾ

ಸಾರಾಂಶ

ಬದಲಾವಣೆ ಬಯಸೋರೆಲ್ಲಾ ಎಡಪಂಥೀಯರು

ಮೈಸೂರು: ಬದಲಾವಣೆ ಬಯಸುವವರೆಲ್ಲಾ ಎಡಪಂಥೀಯರು, ಬಯಸದವರು ಬಲಪಂಥೀಯರು ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ವ್ಯಾಖ್ಯಾನಿಸಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ಪ್ರೊ.ಮಲೆಯೂರು ಗುರುಸ್ವಾಮಿ-70 ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಚಲಿತ ರಾಜಕೀಯ ನುಡಿಗಟ್ಟು, ವ್ಯಾಕರಣ ತುಲನೆ ಮಾಡಿದಾಗ ಎಡಪಂಥೀಯ, ಬಲಪಂಥೀಯ ಎಂಬ ಸೈದ್ಧಾಂತಿಕ ಪ್ರಚಾರ ನಡೆದಿದೆ. ಸಮಾಜದಲ್ಲಿ ಸಮಾನತೆ ಬಯಸಿದ ಬಸವಣ್ಣ, ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಎಡಪಂಥೀಯರೇ ಎಂದು ಹೇಳಿದರು.

ಯಾವಾಗಲೋ, ಎಲ್ಲಿಂದಲೋ ಬಂದವರೆಲ್ಲಾ ನಮ್ಮವರೇ. ಯಾರನ್ನೂ ದೇಶ ಬಿಟ್ಟು ಹೋಗಿ ಎನ್ನಬಾರದು. ಈ ರೀತಿಯ ಮನಸ್ಥಿತಿಯಿಂದಲೇ ದೇಶ ಹಾಳಾಗಿ ಹೋಗುತ್ತಿದೆ ಎಂದು ಅವರು ಹೇಳಿದರು.

ಆರು ಸಾವಿರ ಶ್ರೀ ಆಗುತ್ತಿದ್ದೆ: ಚಂಪಾ

ನಾನೇನಾದರೂ ಸ್ವಾಮೀಜಿ ಆಗಿದ್ದಿದ್ರೆ ಸಿಕ್ಸ್ ಥೌಸೆಂಡ್ ಸ್ವಾಮೀಜಿ ಆಗಿರುತ್ತಿದ್ದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಭಾನುವಾರ ನಗರದಲ್ಲಿ ಪ್ರೊ. ಮಲೆಯೂರು ಗುರುಸ್ವಾಮಿ-70 ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸ್ವಾಮೀಜಿ ಆಗಬೇಕಿತ್ತು. ಆದರೆ ಆಗಲಿಲ್ಲ. ಆಗಿದ್ದರೆ ಏನೇನು ಅನಾಹುತ ಆಗ್ತಿದ್ದವೋ ಗೊತ್ತಿಲ್ಲ ಎಂದರು.  ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠ ಇದೆ. ಆ ಸ್ವಾಮೀಜಿಯನ್ನು ನಾನು ಥ್ರೀ ಥೌಸೆಂಡ್ ಸ್ವಾಮೀಜಿ ಅಂತಾನೆ ಕರೆಯೋದು. ನಾನೇನಾದ್ರು ಸ್ವಾಮೀಜಿ ಆಗಿದ್ರೆ ಸಿಕ್ಸ್ ಥೌಸೆಂಡ್ ಸ್ವಾಮೀಜಿ ಆಗ್ತಿದ್ದೆ ಎಂದು ಚಂಪಾ ಮತ್ತೊಮ್ಮೆ ನಗಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್