ಮೀನೂಟ ಮಾಡಿ ಧರ್ಮಸ್ಥಳ ದೇಗುಲಕ್ಕೆ ಸಿಎಂ ಭೇಟಿ; ಹೊಸ ವಿವಾದ

Published : Oct 23, 2017, 04:23 PM ISTUpdated : Apr 11, 2018, 12:35 PM IST
ಮೀನೂಟ ಮಾಡಿ ಧರ್ಮಸ್ಥಳ ದೇಗುಲಕ್ಕೆ ಸಿಎಂ ಭೇಟಿ; ಹೊಸ ವಿವಾದ

ಸಾರಾಂಶ

ಸಿಎಂ ಅವರ ಈ ನಡತೆಯು ಟೀಕೆಗೆ ಗುರಿಯಾಗಿದೆ. ಜನರಿಗೆ ಆದರ್ಶಪ್ರಾಯವಾಗಬೇಕಾದ ಮುಖ್ಯಮಂತ್ರಿಗಳು ಇಂಥ ನಡತೆಯ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಮುಖಂಡರು ಖಂಡಿಸಿದ್ದಾರೆ.

ಬೆಂಗಳೂರು(ಅ. 23): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಂಸಾಹಾರ ಸೇವಿಸಿ ಧರ್ಮಸ್ಥಳದ ಮಂಜುನಾಥೇಶ್ವರ ದೇಗುಲಕ್ಕೆ ಭೇಟಿ ಕೊಟ್ಟ ಘಟನೆ ಹೊಸ ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳು ನಿನ್ನೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಅದಕ್ಕೆ ಮುನ್ನ ಭಂಟ್ವಾಳದಲ್ಲಿ ಸಿದ್ದರಾಮಯ್ಯನವರು ಮೀನಿನ ಊಟ ಮಾಡಿದ್ದರು.

ಧರ್ಮಸ್ಥಳವನ್ನು ಪುಣ್ಯಕ್ಷೇತ್ರವೆಂದು ಪರಿಗಣಿಸಲಾಗಿದ್ದು, ಆ ಕ್ಷೇತ್ರದಲ್ಲಿ ಸಿಗರೇಟ್, ಮದ್ಯ, ಮಾಂಸ ಇತ್ಯಾದಿಗಳು ಲಭ್ಯವಿಲ್ಲ. ಇಲ್ಲಿ ಮಾಂಸಾಹಾರ, ಮದ್ಯಸೇವನೆ ಮಾಡಿ ದೇವಸ್ಥಾನದ ಆವರಣ ಪ್ರವೇಶಿಸಬಾರದು ಎಂಬ ಮಾತಿದೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿಯಿಂದ ಇಂಥ ಯಾವ ಲಿಖಿತ ನಿಯಮವಿಲ್ಲ.

ಆದರೆ, ಸಿಎಂ ಅವರ ಈ ನಡತೆಯು ಟೀಕೆಗೆ ಗುರಿಯಾಗಿದೆ. ಜನರಿಗೆ ಆದರ್ಶಪ್ರಾಯವಾಗಬೇಕಾದ ಮುಖ್ಯಮಂತ್ರಿಗಳು ಇಂಥ ನಡತೆಯ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಮುಖಂಡರು ಖಂಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಘೋರ ಅಪರಾಧವನ್ನೇನೂ ಮಾಡಿಲ್ಲ. ಭಕ್ತಿ ಎಂಬುದು ಮನಸ್ಸಿನಲ್ಲಿರುವುದು ಮುಖ್ಯ. ಮಾಂಸಾಹಾರ ಸೇವಿಸಿ ದೇವರ ದರ್ಶನ ಮಾಡಬಾರದು. ಹಾಗಂತ, ಮಾಡಿಬಿಟ್ಟರೆ ಅದೇನೂ ಪ್ರಮಾದವೇನಲ್ಲ. ಸಿಎಂ ಬೇಕಂತಲೇ ಈ ಕೆಲಸ ಮಾಡಿಲ್ಲವಾದರೆ ಏನೂ ಕೆಟ್ಟದ್ದಲ್ಲ ಎಂದು ಆದ್ಯಾತ್ಮ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯದಲ್ಲಿ ಸೆಮಿಕಂಡಕ್ಟರ್ ಕಂಪನಿಗೆ 100 ಎಕರೆ ಜಾಗ; ಕುಮಾರಸ್ವಾಮಿಗೆ ಎಂ.ಬಿ. ಪಾಟೀಲ ಪತ್ರ
ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದರೂ ಒಂದು ತಿಂಗಳ ನಂತರ ಬಾಲಕಿ ಸಾವು