ಬೆಂಗಳೂರಿನಲ್ಲೂ ನೀರವ್​ ಮೋದಿ ಮಾದರಿಯಲ್ಲಿ ಅಕ್ರಮ; 25 ಕೋಟಿ ರೂ ಪಂಗನಾಮ

Published : Mar 22, 2018, 07:51 AM ISTUpdated : Apr 11, 2018, 01:10 PM IST
ಬೆಂಗಳೂರಿನಲ್ಲೂ  ನೀರವ್​ ಮೋದಿ  ಮಾದರಿಯಲ್ಲಿ  ಅಕ್ರಮ; 25 ಕೋಟಿ ರೂ ಪಂಗನಾಮ

ಸಾರಾಂಶ

ಬೆಂಗಳೂರಿನಲ್ಲಿ  ನೀರವ್ ಮೋದಿಯಂತೆ ಇನ್ನೊಬ್ಬ ವಂಚಕ  ಸಿಕ್ಕಿದ್ದಾನೆ. ಸಾವಿರಾರು ಕೋಟಿ ವಂಚನೆ ಮಾಡಿ  ಪರಾರಿಯಾಗಿರುವ ನೀರವ್​ ಮೋದಿ ಮಾದರಿಯಲ್ಲಿ ಬ್ಯಾಂಕ್​ ವಂಚನೆ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು (ಮಾ. 22):  ಬೆಂಗಳೂರಿನಲ್ಲಿ  ನೀರವ್ ಮೋದಿಯಂತೆ ಇನ್ನೊಬ್ಬ ವಂಚಕ  ಸಿಕ್ಕಿದ್ದಾನೆ. ಸಾವಿರಾರು ಕೋಟಿ ವಂಚನೆ ಮಾಡಿ  ಪರಾರಿಯಾಗಿರುವ ನೀರವ್​ ಮೋದಿ ಮಾದರಿಯಲ್ಲಿ ಬ್ಯಾಂಕ್​ ವಂಚನೆ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದೆ. ಬ್ಯಾಂಕ್​ ಅಧಿಕಾರಿಗಳು, ದೇವನಹಳ್ಳಿ ಸಬ್​ ರಿಜಿಸ್ಟ್ರಾರ್​ ಕಚೇರಿಯ ಅಧಿಕಾರಿಗಳು ಬಿಲ್ಡರ್​ ಒಬ್ಬನ ಜೊತೆ ಸೇರಿ ವಂಚನೆ ಮಾಡಿದ್ದಾರೆ. ಬೆಂಗಳೂರಿನ ಸಹಕಾರ ನಗರದ ನಿವಾಸಿ ಕೆ.ಮುನಿರಾಜು ಹಾಗೂ ಆತನ ಪತ್ನಿ ಪುಷ್ಟ ಎಂಬುವವರು ಸೇರಿ ಬ್ಯಾಂಕ್​ಗೆ 25 ಕೋಟಿ ರೂಪಾಯಿ ಟೋಪಿ ಹಾಕಿದ್ದಾರೆ. ಈ ಸಂಬಂಧ ದಾಖಲೆಗಳನ್ನು ಕಲೆ ಹಾಕಿರುವ ಆರ್​ಟಿಐ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಸಿಬಿಐಗೆ ದೂರು ಸಲ್ಲಿಸಿದ್ದಾರೆ.

ಈ ಕಂಪನಿ ಆಸ್ತಿಯ ನಕಲಿ ದಾಖಲೆ ಸೃಷ್ಟಿ  ಮಾಡಿ ಬ್ಯಾಂಕ್​ಗೆ ಅಡಮಾನ ಮಾಡಿ 25 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ಈ ವಂಚನೆಯಲ್ಲಿ ಹೆಬ್ಬಾಳದ ಕೆನರಾ ಬ್ಯಾಂಕ್​​ ಸಿಬ್ಬಂದಿ, ದೇವನಹಳ್ಳಿ ಸಬ್​ ರಿಜಿಸ್ಟ್ರಾರ್​ ಕಚೇರಿ ಸಿಬ್ಬಂದಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ. ಈಗಾಗಲೇ 500 ಪುಟಗಳ ದಾಖಲೆ ಸಮೇತ ಸಿಬಿಐ ಎಸ್​​ಪಿ ರೂಪ ಅವರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಸಿಬಿಐ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ