ಸಚಿವರ ಆರೋಗ್ಯ ತಪಾಸಣೆಗೆ ಡಾ. ದೇವಿಶೆಟ್ಟಿ ಕರೆಸಿದ ಬಾಂಗ್ಲಾ ಪ್ರಧಾನಿ!

Published : Mar 05, 2019, 09:59 AM IST
ಸಚಿವರ ಆರೋಗ್ಯ ತಪಾಸಣೆಗೆ ಡಾ. ದೇವಿಶೆಟ್ಟಿ ಕರೆಸಿದ ಬಾಂಗ್ಲಾ ಪ್ರಧಾನಿ!

ಸಾರಾಂಶ

ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಕೋರಿಕೆ ಮೇರೆಗೆ ತಪಾಸಣೆ| ಸಿಂಗಾಪುರಕ್ಕೆ ತೆರಳಿ ಚಿಕಿತ್ಸೆ ಪಡೆಯಲು ಸಚಿವಗೆ ಡಾ.ದೇವಿಶೆಟ್ಟಿಸಲಹೆ

ಡಾಕಾ[ಮಾ.05]: ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರ ಕೋರಿಕೆ ಮೇರೆಗೆ ಬೆಂಗಳೂರು ಮೂಲದ ವಿಶ್ವವಿಖ್ಯಾತ ಹೃದಯ ತಜ್ಞ ಡಾ. ದೇವಿ ಶೆಟ್ಟಿಅವರು ಬಾಂಗ್ಲಾದೇಶದ ಸಚಿವರ ಆರೋಗ್ಯ ತಪಾಸಣೆ ಮಾಡಿದ್ದಾರೆ.

ತೀವ್ರ ಅನಾರೋಗ್ಯದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಂಗ್ಲಾ ಸಚಿವ ಒಬೈದುಲ್‌ ಖಾದರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏತನ್ಮಧ್ಯೆ, ಭಾನುವಾರ ಸಂಜೆಯೇ ಡಾ.ದೇವಿಶೆಟ್ಟಿಅವರಿಗೆ ಕರೆ ಮಾಡಿದ್ದ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರು, ಖಾದರ್‌ ಆರೋಗ್ಯವನ್ನು ತಪಾಸಣೆ ಮಾಡುವಂತೆ ಕೋರಿದ್ದರು.

ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಡಾಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಾ. ಶೆಟ್ಟಿಅವರು, ನೇರವಾಗಿ ಖಾದರ್‌ ಅವರು ದಾಖಲಾಗಿದ್ದ ಶೇಖ್‌ ಮುಜಿಬ್‌ ಮೆಡಿಕಲ್‌ ವಿವಿ ಆಸ್ಪತ್ರೆಗೆ ತೆರಳಿದರು. ಸಚಿವರ ಆರೋಗ್ಯ ತಪಾಸಣೆ ಮಾಡಿದ ಶೆಟ್ಟಿಅವರು, ಸಚಿವರಿಗೆ ಸಿಂಗಾಪುರದಲ್ಲಿ ಉತ್ತಮ ಚಿಕಿತ್ಸೆ ಲಭ್ಯವಾಗಲಿದೆ ಎಂದು ಸಲಹೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ