
ಬೆಂಗಳೂರು(ಸೆ.27): ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಗಾರ್ಬೇಜ್ ಸಿಟಿ ಹಾಗೂ ಇತ್ತೀಚಿಗೆ ಅತಿಯಾದ ವಾಹನಗಳಿಂದ ಟ್ರಾಫಿಕ್ ಸಿಟಿ ಎಂದು ಖ್ಯಾತಿ ಮತ್ತು ಕುಖ್ಯಾತಿ ಪಡೆದಿರುವ ಬೆಂಗಳೂರಿನ ಹೆಸರು ಕೆಲವೇ ದಿನಗಳಲ್ಲಿ ಬದಲಾಗುವ ಲಕ್ಷಣಗಳು ಗೋಚರಿಸುತ್ತಿದೆ. ಏಕೆಂದರೆ ಬಿಬಿಎಂಪಿ ಕೆಲವು ವರ್ಷಗಳ ಹಿಂದೆ ನಗರದ ಸೌಂದರ್ಯವನ್ನು ಹೆಚ್ಚಿಸಲು ರಸ್ತೆ ಗೋಡೆಗಳ ಮೇಲೆ ರಾಜ್ಯದ ಇತಿಹಾಸ ಸಾರುವ ಚಿತ್ರಗಳನ್ನು ಬಿಡಿಸಲಾಗಿತ್ತು.
ಕೆಲವು ಸಂಘಟನೆಗಳು ಆ ಚಿತ್ರಗಳನ್ನು ಅಳಿಸಿ ತಮ್ಮ ಸಭೆ, ಸಮಾರಂಭ, ಸಮ್ಮೇಳನಗಳ ಗೋಡೆ ಬರಹ, ಇತ್ಯಾದಿ ಜಾಹೀರಾತುಗಳನ್ನು ಬರೆದು ಬೆಂಗಳೂರಿನ ಅಂದವನ್ನು ಕೆಡಿಸಿದ್ದರು. ಆದರೆ ಈಗ ಬಿಬಿಎಂಪಿ ಎಚ್ಚರಗೊಂಡು ಅಕ್ರಮವಾಗಿ ಗೋಡೆಗಳ ಮೇಲೆ ಬರೆದಿರುವ ಚಿತ್ರಗಳನ್ನು ಅಳಿಸಿ ಬಿಳಿ ಬಣ್ಣ ಬಳೆಯಲು ಮುಂದಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಬೆಂಗಳೂರು ಸಿಟಿ ವೈಟ್ ಸಿಟಿಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.