ಕನ್ನಡ ಪರ ಹೋರಾಟಗಾರರ ಮೇಲೆ ಕೇಸ್: ಸಿಎಂ ಗರಂ, ಪ್ರವೀಣ್ ಸೂದ್ ವರ್ಗಾವಣೆ !

Published : Jul 31, 2017, 10:05 PM ISTUpdated : Apr 11, 2018, 01:06 PM IST
ಕನ್ನಡ ಪರ ಹೋರಾಟಗಾರರ ಮೇಲೆ ಕೇಸ್: ಸಿಎಂ ಗರಂ, ಪ್ರವೀಣ್ ಸೂದ್ ವರ್ಗಾವಣೆ !

ಸಾರಾಂಶ

ಪ್ರವೀಣ್​ ಸೂದ್​ ಅವರು 2017ರ ಅಕ್ಟೋಬರ್​ನಲ್ಲಿ ಎಡಿಜಿಪಿಯಿಂದ ಡಿಜಿ ಹುದ್ದೆಗೆ ಬಡ್ತಿ ಹೊಂದಲಿದ್ದು, ಅಲ್ಲಿಯವರೆಗೂ ಕಮಿಷನರ್​ ಹುದ್ದೆ ಇಲ್ಲ ಎಂದು ಇಲಾಖೆಯ ಲೆಕ್ಕಾಚಾರವಾಗಿತ್ತು. ಸರ್ಕಾರ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದು, ಬೆಂಗಳೂರಿಗೆ ನೋತನ ಪೊಲೀಸ್​ ಸಾರಥಿಯನ್ನು ನಿಯೋಜನೆ ಮಾಡಿದೆ.

ಬೆಂಗಳೂರು(ಜು.31): ಬೆಂಗಳೂರು ಪೊಲೀಸ್​​ ಇಲಾಖೆಯ ಸಾರಥಿಯನ್ನು ರಾಜ್ಯ ಸರ್ಕಾರ ಇದ್ದಕ್ಕಿದ್ದಂತೆ ಬದಲಾವಣೆ ಮಾಡಿ ಅಚ್ಚರಿ ಮೂಡಿಸಿದೆ. ಕೇವಲ 7 ತಿಂಗಳ ಕಾಲ ಕಮಿಷನರ್​​ ಕಾರ್ಯ ನಿರ್ವಹಿಸಿದ ಅವರಿಗೆ ಕೋಕ್​​ ನೀಡಿ, ಟಿ.ಸುನಿಲ್​ ಕುಮಾರ್​ ಅವರಿಗೆ ಮಣೆ ಹಾಕಲಾಗಿದೆ. ತುಂಬ ದಿನಗಳ ಪ್ರಯತ್ನದ ಬಳಿಕ ಸುನಿಲ್​​ ಕುಮಾರ್​ ಕೊನೆಗೂ ಪೊಲೀಸ್​ ಕಮಿಷನರ್​​ ಹುದ್ದೆಯನ್ನು ಇಂದು ಅಲಂಕರಿಸಿದ್ದಾರೆ.

ಪ್ರವೀಣ್​ ಸೂದ್​ ಅವರು 2017ರ ಅಕ್ಟೋಬರ್​ನಲ್ಲಿ ಎಡಿಜಿಪಿಯಿಂದ ಡಿಜಿ ಹುದ್ದೆಗೆ ಬಡ್ತಿ ಹೊಂದಲಿದ್ದು, ಅಲ್ಲಿಯವರೆಗೂ ಕಮಿಷನರ್​ ಹುದ್ದೆ ಇಲ್ಲ ಎಂದು ಇಲಾಖೆಯ ಲೆಕ್ಕಾಚಾರವಾಗಿತ್ತು. ಸರ್ಕಾರ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದು, ಬೆಂಗಳೂರಿಗೆ ನೋತನ ಪೊಲೀಸ್​ ಸಾರಥಿಯನ್ನು ನಿಯೋಜನೆ ಮಾಡಿದೆ.

ಪೊಲೀಸ್​ ಆಯುಕ್ತರಾಗಿ ಅಧಿಕಾರಿ ಸ್ವೀಕರಿಸಿರುವ ಸುನಿಲ್​​ ಕುಮಾರ್​ ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಮೂಲದವರು. 1989ರ ಬ್ಯಾಚ್​ನ ಕರ್ನಾಟಕ ಕೇಡರ್​​ ಅಧಿಕಾರಿಯಾಗಿ ಆಯ್ಕೆಯಾದ ಸುನಿಲ್​ ಕುಮಾರ್ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಸ್​ಪಿ ಆಗಿ, ಬೆಂಗಳೂರು ಹೆಚ್ಚುವರಿ ಪೊಲೀಸ್​ ಆಯುಕ್ತರಾಗಿ ಕೆಲಸ ಮಾಡಿದ ಅನುಭವ ಕೂಡ ಅವರಿಗಿದ್ದು, ಬೆಂಗಳೂರು ನಗರದ ಬಗ್ಗೆ ಸಾಕಷ್ಟು ಅನುಭನವ ಹೊಂದಿದ್ದಾರೆ. ಅಲ್ಲದೆ, ಬೆಂಗಳೂರು ಪೊಲೀಸ್​ ಆಯುಕ್ತರಾಗುವ ಬಹುದಿನ ಅವರ ಕನಸು ಇಂದು ನನಸಾಗಿದೆ.

ಹೋರಾಟಗಾರರ ಮೇಲೆ ಕೇಸ್ ಹಾಕಿದ್ದಕ್ಕೆ ವರ್ಗಾವಣೆ ?

ಸುವರ್ಣ ನ್ಯೂಸ್'ಗೆ ಬಂದಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ ಮೆಟ್ರೋ ಕನ್ನಡ ಪರ ಹೋರಾಟಗಾರರ ಮೇಲೆ ಕೇಸ್ ಹಾಕಿದ್ದಕ್ಕೆ ಗರಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ