
ಬೆಂಗಳೂರು(ಅ.13): ಶ್ರೀರಾಂಪುರದ ದಯಾನಂದನಗರದಲ್ಲಿ ಪ್ರತಿ ವರ್ಷ ಆಚರಿಸಲಾಗುವ ಸರ್ಕಲ್ ಮಾರಮ್ಮ ಉತ್ಸವವನ್ನು ಈ ಬಾರಿಯೂ ಅದ್ದೂರಿಯಾಗಿ ಆಚರಿಸಲಾಯಿತು. ಮೂರು ದಿನಗಳ ಕಾಲ ನಡೆಯುವ ದೇವರ ಉತ್ಸವದಲ್ಲಿ ಈ ಬಾರಿ ನಡೆದದ್ದು ಮಾತ್ರ ಲಲನೆಯರ ಥಳಕು ಬಳಕಿನ ಪ್ರದರ್ಶನ. ತಮಿಳುನಾಡು ಮೂಲದ ಹುಡುಗಿಯರನ್ನು ಕರೆಸಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಅಶ್ಲೀಲ ನೃತ್ಯ ಪ್ರದರ್ಶನ ಮಾಡುವ ಮೂಲಕ ನೆರೆದಿದ್ದವರನ್ನು ರಂಜಿಸಲಾಯಿತು.
ಈ ಕಾರ್ಯಕ್ರಮದ ಮೇಲುತ್ಸುವಾರಿ ಸ್ಥಳೀಯ ಕಾಪೋರೇಟರ್ ಕುಮಾರಿ ಪತಿ ಪಳನೀಕಾಂತ್. ವಿಚಿತ್ರವೆಂದರೆ ಈ ಕಾರ್ಯಕ್ರಮದ ಉದ್ದಕ್ಕೂ ವಾರ್ಡ್ ನಂಬರ್ 97ರ ಕಾಪೋರೇಟರ್ ಕುಮಾರಿ ಪತಿ ಪಳನೀಕಾಂತ್ ಅವರದ್ದೇ ಸದ್ದು. ಹುಡುಗಿಯರ ಸೊಂಟ ಹಿಡಿದುಕೊಂಡು ಕಾಪೋರೇಟರ್ ಗಂಡನ ಆಟ ಪಡ್ಡೆ ಹುಡುಗನನ್ನು ಮೀರಿಸುವಂತಿತ್ತು.
ಶ್ರೀರಾಂಪುರದ ಪೊಲೀಸ್ ಠಾಣೆಯ ಪಕ್ಕದಲ್ಲೇ ಇಂಥಾ ಅಶ್ಲೀಲ ನೃತ್ಯ ನಡೆದಿರುವುದು ದುರಂತವೇ ಸರಿ. ಸಮಾಜ ಸೇವಕನ ಹೆಸರಿನಲ್ಲಿ ಇಂಥಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ಪಳನೀಕಾಂತ್'ಗೆ ಅದ್ಯಾವ ಬಲವಿದಿಯೋ ಗೊತ್ತಿಲ್ಲ. ದುರಂತವೆಂದರೆ ಎಲ್ಲಾ ಗೊತ್ತಿದ್ದು, ಶ್ರೀರಾಂಪುರ ಪೊಲೀಸರು ಸುಮ್ಮನಿರುವುದು ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.