ಬಿದಿರು ಮರವಲ್ಲ; ಅರಣ್ಯ ತಿದ್ದುಪಡಿ ಕಾಯ್ದೆಗೆ ಸಂಪುಟ ಒಪ್ಪಿಗೆ

Published : Dec 27, 2017, 10:19 PM ISTUpdated : Apr 11, 2018, 01:06 PM IST
ಬಿದಿರು ಮರವಲ್ಲ; ಅರಣ್ಯ ತಿದ್ದುಪಡಿ ಕಾಯ್ದೆಗೆ ಸಂಪುಟ ಒಪ್ಪಿಗೆ

ಸಾರಾಂಶ

ಈ ಬಗ್ಗೆ ಮಾತನಾಡಿದ ಅರಣ್ಯ ಮಂತ್ರಿ ಹರ್ಷವರ್ಧನ್ ಸಿಂಗ್, ಬುಡಕಟ್ಟು ನಿವಾಸಿಗಳಿಗೆ, ಅರಣ್ಯವಾಸಿಗಳಿಗೆ ಹಾಗೂ ರೈತರಿಗೆ ಈ ತಿದ್ದುಪಡಿ ಸಹಕಾರಿಯಾಗಿದ್ದು, ಅವರ ಆದಾಯದ ಹೆಚ್ಚಳಕ್ಕೂ ಸಹಕಾರಿಯಾಗಲಿದೆ ಎಂದಿದ್ದಾರೆ.

ನವದೆಹಲಿ(ಡಿ.27): ಬುಡಕಟ್ಟು ಜನರ ಹಿತ ಕಾಯುವ ಉದ್ದೇಶದಿಂದ ಭಾರತೀಯ ಅರಣ್ಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಬಿದಿರಿಗೆ ಮರು ವ್ಯಾಖ್ಯಾನ ನೀಡಲಾಗಿದ್ದು, ಇದಕ್ಕೆ ಲೋಕಸಭೆಯಲ್ಲಿ ಇಂದು ಅನುಮೋದನೆ ಸಿಕ್ಕಿದೆ.

ಭಾರತೀಯ ಅರಣ್ಯ ತಿದ್ದುಪಡಿ ಕಾಯ್ದೆಯನ್ನು ಡಿಸೆಂಬರ್ 20 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇಂದು ರಾಜ್ಯಸಭೆಯಲ್ಲಿ ದ್ವನಿಮತದ ಮೂಲಕ ಕಾಯ್ದೆಗೆ ಅನುಮೋದಿಸಲಾಗಿದೆ.

ಕಾಯ್ದೆಯನ್ನು ಸರಿಯಾಗಿ ಚರ್ಚಿಸದೇ ಮಂಡಿಸಲಾಗಿದೆ ಎಂದು ವಿರೋದ ಪಕ್ಷಗಳಾದ ಕಾಂಗ್ರೆಸ್, ಬಿಜು ಜನತಾದಳ ಮತ್ತು ಸಮಾಜವಾದಿ ಪಕ್ಷಗಳು ಪ್ರತಿಭಟನೆ ನಡೆಸಿ ಸದನದಿಂದ ಹೊರ ನಡೆದವು. ಆ ಬಳಿಕ ಅರಣ್ಯ ತಿದ್ದುಪಡಿ ಕಾಯ್ದೆಯನ್ನು ದ್ವನಿಮತದೊಂದಿಗೆ ಅಂಗೀಕಾರ ಮಾಡಲಾಯಿತು.

ಈ ಬಗ್ಗೆ ಮಾತನಾಡಿದ ಅರಣ್ಯ ಮಂತ್ರಿ ಹರ್ಷವರ್ಧನ್ ಸಿಂಗ್, ಬುಡಕಟ್ಟು ನಿವಾಸಿಗಳಿಗೆ, ಅರಣ್ಯವಾಸಿಗಳಿಗೆ ಹಾಗೂ ರೈತರಿಗೆ ಈ ತಿದ್ದುಪಡಿ ಸಹಕಾರಿಯಾಗಿದ್ದು, ಅವರ ಆದಾಯದ ಹೆಚ್ಚಳಕ್ಕೂ ಸಹಕಾರಿಯಾಗಲಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ