ಅಧಿಕಾರಿಗಳ ಹೊಸ ಐಡಿಯಾದಿಂದ ತಪ್ಪಿತು ರೈತರ ಅಲೆದಾಟ: ಬಳ್ಳಾರಿ ಕೃಷಿ ಇಲಾಖೆ ಅಧಿಕಾರಿಗಳಿಂದ ಹೊಸ ಐಡಿಯಾ

Published : Oct 24, 2017, 09:08 AM ISTUpdated : Apr 11, 2018, 12:49 PM IST
ಅಧಿಕಾರಿಗಳ ಹೊಸ ಐಡಿಯಾದಿಂದ ತಪ್ಪಿತು ರೈತರ ಅಲೆದಾಟ: ಬಳ್ಳಾರಿ ಕೃಷಿ ಇಲಾಖೆ ಅಧಿಕಾರಿಗಳಿಂದ  ಹೊಸ ಐಡಿಯಾ

ಸಾರಾಂಶ

ವೈಜ್ಞಾನಿಕ ಕೃಷಿ ಪದ್ಧತಿ ಮಾಹಿತಿ ಇಲ್ಲದೇ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಅಲೆದಾಡುತ್ತಾರೆ. ಆದ್ರೆ ರೈತರ ಇಂಥ ಅಲೆದಾಟ ತಪ್ಪಿಸಲು ಬಳ್ಳಾರಿ ಕೃಷಿ ಇಲಾಖೆ ಅಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ.  

ಬಳ್ಳಾರಿ(ಅ.24): ವೈಜ್ಞಾನಿಕ ಕೃಷಿ ಪದ್ಧತಿ ಮಾಹಿತಿ ಇಲ್ಲದೇ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಅಲೆದಾಡುತ್ತಾರೆ. ಆದ್ರೆ ರೈತರ ಇಂಥ ಅಲೆದಾಟ ತಪ್ಪಿಸಲು ಬಳ್ಳಾರಿ ಕೃಷಿ ಇಲಾಖೆ ಅಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ.  

ಜಿಲ್ಲೆಯ ಪ್ರತಿ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯ ರೈತರ ವಾಟ್ಸಾಪ್​ ಗ್ರೂಪ್ ಆರಂಭಿಸಿದ್ದಾರೆ. ವಾಟ್ಸಾಪ್​ ಬಳಕೆ ಮಾಡುವ ರೈತರ ಪೋನ್ ನಂಬರ್'ಗಳನ್ನ ಕ್ರೋಢಿಕರಿಸಿ ವಾಟ್ಸಾಪ್​ ಗ್ರೂಪ್ ಮಾಡಿದ್ದಾರೆ. ರೈತರು ಕೃಷಿಗೆ ಸಂಬಂಧಿಸಿದಂತೆ ತಮಗೆ ಬೇಕಾದ ಮಾಹಿತಿಗಳನ್ನ ಈ ಗ್ರೂಪ್ ನಲ್ಲಿ ಹಾಕಿದ್ರೆ ಸಾಕು. ಕೃಷಿ ಅಧಿಕಾರಿಗಳು, ಕೃಷಿ ತಜ್ಞರು ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಾರೆ. 

ಯಾವ ಬೆಳೆ ಹೇಗೆ ಬೆಳಿಯೋದು? ಯಾವ ಬೀಜ ಉತ್ತಮ? ಗೊಬ್ಬರ? ಔಷಧಿ ಹೀಗೆ ಎಲ್ಲಾ ಮಾಹಿತಿಗಳನ್ನೂ ಪ್ರಾತ್ಯಕ್ಷಿಕ ವಿಡಿಯೋ ಜೊತೆ ವಾಟ್ಸಾಪ್​ ಮೂಲಕವೇ ರೈತರಿಗೆ ಕಲ್ಪಿಸಲಾಗುತ್ತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?
ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!