ಠಾಣೆಗೆ ನುಗ್ಗಿ ಪೊಲೀಸ್ ವಶದಲ್ಲಿದ್ದ ಮುಖಂಡನನ್ನು ಕರದೊಯ್ದ ಭಜರಂಗ ದಳ ಮಂದಿ!

Published : Jul 16, 2017, 01:47 PM ISTUpdated : Apr 11, 2018, 01:10 PM IST
ಠಾಣೆಗೆ ನುಗ್ಗಿ ಪೊಲೀಸ್ ವಶದಲ್ಲಿದ್ದ ಮುಖಂಡನನ್ನು ಕರದೊಯ್ದ ಭಜರಂಗ ದಳ ಮಂದಿ!

ಸಾರಾಂಶ

ಪೊಲೀಸ್ ಠಾಣೆಗೆ ಬಲವಂತವಾಗಿ ನುಗ್ಗಿದ ಭಜರಂಗದಳದ ಕಾರ್ಯಕರ್ತರು ಬಂಧಿತ ಮುಖಂಡನನ್ನು ಕರೆದೊಯ್ದ ಅಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ನಿಸ್ಸಹಾಯಕರಾಗಿ ನೋಡುತ್ತಿದ್ದರು ಎನ್ನಲಾಗಿದೆ.

ಭೋಪಾಲ್:  ಪೊಲೀಸ್ ಠಾಣೆಗೆ ಬಲವಂತವಾಗಿ ನುಗ್ಗಿದ ಭಜರಂಗದಳದ ಕಾರ್ಯಕರ್ತರು ಬಂಧಿತ ಮುಖಂಡನನ್ನು ಕರೆದೊಯ್ದ ಅಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ನಿಸ್ಸಹಾಯಕರಾಗಿ ನೋಡುತ್ತಿದ್ದರು ಎನ್ನಲಾಗಿದೆ.

ಅರೇರಾ ಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ, ಪೊಲೀಸ್ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಆರೋಪದಲ್ಲಿ ಭಜರಂಗ ದಳದ ಮುಖಂಡ ಕಮಲೇಶ್ ಥಾಕೂರ್’ನನ್ನು ಬಂಧಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಹಬೀಬ್’ಗಂಜ್ ಠಾಣೆಗೆ ಬಲವಂತವಾಗಿ ನುಗ್ಗಿದ ಕಾರ್ಯಕರ್ತರ ಗುಂಪು, ಆರೋಪಿಯನ್ನು ಲಾಕಪ್’ನಿಂದ ಕರೆದೊಯ್ದಿದ್ದಾರೆ ಎಂದು ನ್ಯೂಸ್’ಬಿಟ್ಸ್ ವರದಿ ಮಾಡಿದೆ.

ಮುಖಂಡನನ್ನು  ಈ ರೀತಿ ಬಿಡಿಸಿದ ಬಳಿಕ ಭಜರಂಗದಳದ ಮಂದಿ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿ ವಿಜಯೋತ್ಸವವನ್ನು ಆಚರಿಸಿದ್ದಾರೆ.

ಮಾಧ್ಯಮದವರು ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಆದರೆ ಪೊಲೀಸರು ಠಾಕೂರ್’ನನ್ನಾಗಲಿ ಅಥವಾ ಇತರ ರೋಪಿಗಳನ್ನಾಗಲಿ ಈವರೆಗೆ ಬಂಧಿಸಿಲ್ಲವೆನ್ನಲಾಗಿದೆ. ಠಾಕೂರ್ ಭಜರಂಗದಳದ ಪ್ರಾದೇಶಿಕ ಸಹ-ಸಂಚಾಲಕನಾಗಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!
ರಾಜ್ಯಾದ್ಯಂತ ಎಲ್‌ಕೆಜಿ ಯಿಂದ ಪಿಯುಸಿವರೆಗೆ ಕಲಿಕಾ ಸಮಯದ ಅವಧಿ ಬದಲಾಯಿಸುವಂತೆ ಶಿಕ್ಷಣ ಇಲಾಖೆಗೆ ಮಕ್ಕಳ ಆಯೋಗ ಪತ್ರ