ಹೋಂ ಸ್ಟೇ ದಾಳಿ ವೇಳೆ ಸಿಕ್ಕಿಬಿದ್ದಿದ್ದ ನಾಲ್ವರಿಗೆ ಜಾಮೀನು

By Internet DeskFirst Published Sep 17, 2016, 1:00 PM IST
Highlights

ಕುಶಾಲನಗರ (ಸೆ.17): ಹೋಂ ಸ್ಟೇ  ಮೇಲೆ ದಾಳಿ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ವಿಧಾನಸಭೆ ಶಾಸಕರ ಪುತ್ರ ರಾಜೀವ್​ ಸೇರಿದಂತೆ ನಾಲ್ವರಿಗೆ ಇಲ್ಲಿನ ಜೆಎಂಎಫ್​ಸಿ ಕೋರ್ಟ್​ ಜಾಮೀನು ನೀಡಿದೆ.

ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪಗಳ ಆಧಾರದಲ್ಲಿ ಸೆಪ್ಟೆಂಬರ್ 11ರ ರಾತ್ರಿ ಪೊಲೀಸರು ಕುಶಾಲನಗರದ ಕೂರ್ಗ್​ ರಿವರ್ ವ್ಯೂ ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದರು.

ಆ ಸಂದರ್ಭದಲ್ಲಿ ತುರುವೇಕೆರೆ ಶಾಸಕ ಕೃಷ್ಣಪ್ಪ ಪುತ್ರ ಕೆ.ರಾಜೀವ್​ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

ಆರೋಪಿಗಳಿಗೆ ತಲಾ 25 ಸಾವಿರ ಬಾಂಡ್ ಮೇಲೆ ಜಾಮೀನು ನೀಡಿರುವ ದ ಕೋರ್ಟ್​, ಪ್ರತಿ ತಿಂಗಳ 2ನೇ ಶನಿವಾರ  ಕುಶಾಲನಗರ ಗ್ರಾ. ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದೆ.

click me!