ಲೋಕಾಯುಕ್ತ ಸಂಸ್ಥೆಯ ಡೀಲ್ ಪ್ರಕರಣದ ಆರೋಪಿಗಳಿಗೆ ಜಾಮೀನು

Published : Sep 17, 2016, 12:15 PM ISTUpdated : Apr 11, 2018, 01:05 PM IST
ಲೋಕಾಯುಕ್ತ ಸಂಸ್ಥೆಯ ಡೀಲ್ ಪ್ರಕರಣದ ಆರೋಪಿಗಳಿಗೆ ಜಾಮೀನು

ಸಾರಾಂಶ

ಬೆಂಗಳೂರು(ಸೆ.19): ಲೋಕಾಯುಕ್ತ ಸಂಸ್ಥೆಯ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ಎಲ್ಲಾ 13 ಮಂದಿ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಸೈಯದ್ ರಿಯಾಜ್, ಅಶ್ವಿನ್ ರಾವ್, ಶಂಕರೇಗೌಡ, ಶ್ರೀನಿವಾಸ ಗೌಡ ಹಾಗೂ ಪ್ರಕರಣದ ಕಿಂಗ್ ಪಿನ್ ಅಶ್ವಿನ್ ರಾವ್  ಸೇರಿ 13 ಮಂದಿಗೆ ಜಾಮೀನು ನೀಡಿದೆ. ಆರೋಪಿಗಳು 1 ಲಕ್ಷ ರೂ. ಬಾಂಡ್, ಭದ್ರತಾ ಶ್ಯೂರಿಟಿ, ಪಾಸ್ ಪೋರ್ಟ್'ಅನ್ನು ಎಸ್ಐಟಿ ತನಿಖಾಧಿಕಾರಿಗೆ ನೀಡಬೇಕು. ತನಿಖೆಗೆ ಸಹಕರಿಸಬೇಕು ಜೊತೆಗೆ ಸಾಕ್ಷ್ಯವನ್ನು ನಾಶ ಪಡಿಸಬಾರದು ಈ ಎಲ್ಲಾ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.

ಜಾಮೀನು ಪಡೆದುಕೊಂಡಿರುವ ಆರೋಪಿಗಳು  1.4 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಈ ಹಿಂದೆಯೂ ಹೈಕೋರ್ಟ್ ಜಾಮೀನಿಗೆ ಅರ್ಜಿ ಹಾಕಿದ್ದರು ಆದರೆ ಆದರೆ ಪ್ರಕರಣ ಗಂಭೀರವಾದದ್ದು ಜಾಮೀನು ನೀಡಬಾರದು ಎಂದು ಎಸ್'ಐಟಿ ಸುಪ್ರೀಂ ಕೋರ್ಟ್'ಗೆ ಮೊರೆ ಹೋಗಿತ್ತು. ಹೀಗಾಗಿ ಜಾಮೀನು ನೀಡಿರಲಿಲ್ಲ. ಇದೀಗ 13 ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.                      

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು