ಆಕಸ್ಮಿಕ ಗುಂಡು ತಗುಲಿ ಬಾಗಲಕೋಟೆ ಯೋಧ ಸಾವು

By Web DeskFirst Published May 17, 2019, 12:04 PM IST
Highlights

ಆಕಸ್ಮಿಕವಾಗಿ ಗುಂಡು ತಗುಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯ ಸಿಆರ್ ಪಿಎಫ್ ಯೋಧ ಗಿರಿಯಪ್ಪ ಕಿರಸೂರ (29) ಸಾವನ್ನಪ್ಪಿದ್ದಾರೆ. 
 

ಬಾಗಲಕೋಟೆ (ಮೇ. 17): ಆಕಸ್ಮಿಕವಾಗಿ ಗುಂಡು ತಗುಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯ ಸಿಆರ್ ಪಿಎಫ್ ಯೋಧ ಗಿರಿಯಪ್ಪ ಕಿರಸೂರ (29) ಸಾವನ್ನಪ್ಪಿದ್ದಾರೆ. 

ಗಿರಿಯಪ್ಪ  ಬಿಹಾರದಲ್ಲಿ ಬೆಟಾಲಿಯನ್ 224 ನಲ್ಲಿ ಇದ್ದರು.  ಪಾಟ್ನಾದಲ್ಲಿ ವಿಐಪಿಗಳಿಗೆ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.  2012 ರಲ್ಲಿ ಸಿಆರ್ ಪಿಎಫ್ ನಲ್ಲಿ ಕಾನ್ ಸ್ಟೇಬಲ್ ಆಗಿ ನೇಮಕಗೊಂಡಿದ್ದರು. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. 
 

click me!