ಕಾಲುವೆ ಬಿದ್ದ ಆನೆ ಮರಿಯನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ

Published : Mar 26, 2018, 02:03 PM ISTUpdated : Apr 11, 2018, 12:48 PM IST
ಕಾಲುವೆ ಬಿದ್ದ ಆನೆ ಮರಿಯನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ

ಸಾರಾಂಶ

ಕಾಲುವೆಯಲ್ಲಿ ಸಿಲುಕಿದ್ದ ಆನೆ ಮರಿಯನ್ನು  ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.  ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡಿನಿಂದ ಬೇರ್ಪಟ್ಟು ಆನೆ ಮರಿಯೊಂದು ಕಾಲುವೆಗೆ ಬಿದ್ದಿತ್ತು.  

ಬೆಂಗಳೂರು (ಮಾ. 26): ಕಾಲುವೆಯಲ್ಲಿ ಸಿಲುಕಿದ್ದ ಆನೆ ಮರಿಯನ್ನು  ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.  ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡಿನಿಂದ ಬೇರ್ಪಟ್ಟು ಆನೆ ಮರಿಯೊಂದು ಕಾಲುವೆಗೆ ಬಿದ್ದಿತ್ತು.  

ತಮಿಳುನಾಡಿನ ಹೊಸೂರು ಬಳಿಯ ಕಾಮನ ದೊಡ್ಡಿ ಬಳಿ ಗುಂಪಿನೊಂದಿಗೆ ಬಂದಿದ್ದ ವೇಳೆ ಕಾಲುವೆಗೆ ಬಿದ್ದಿದ್ದ ಆನೆ‌ ಮರಿಯನ್ನು ಹರಸಾಹಸ ಪಟ್ಟು ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.  ಕಳೆದ ಎರಡು ತಿಂಗಳಲ್ಲಿ‌ ಇದು ನಾಲ್ಕನೇ ಬಾರಿ ಗುಂಪಿನಿಂದ ಆನೆ ಮರಿಗಳು ತಪ್ಪಿಸಿಕೊಂಡಿವೆ. ಆನೆ ಮರಿಗಳನ್ನು ಮತ್ತೆ ತನ್ನ ಗುಂಪಿನೊಂದಿಗೆ ಸೇರಿಸುವ ಪ್ರಯತ್ನಪಟ್ಟರೂ ಗುಂಪಿನೊಂದಿಗೆ ಸೇರದೆ ಮತ್ತೆ ಆನೆ ಮರಿಗಳು ನಾಡಿನತ್ತ ಬರುತ್ತಿವೆ.  ನಾಡಿಗೆ ಬಂದ ಆನೆ ಮರಿಗಳನ್ನ ತಮಿಳುನಾಡಿನ ಡೆಂಕಣಿಕೋಟೆ ಆನೆ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!