ಅಯೋಧ್ಯೆ ತೀರ್ಪು ಮುಸ್ಲಿಂ ಪರ ಬಂದರೆ ಮಸೀದಿ ಕಟ್ಟಲ್ಲ ಎಂದ ದಾವೇದಾರರು!

Published : Oct 20, 2019, 09:15 AM ISTUpdated : Oct 20, 2019, 11:15 AM IST
ಅಯೋಧ್ಯೆ ತೀರ್ಪು ಮುಸ್ಲಿಂ ಪರ ಬಂದರೆ ಮಸೀದಿ ಕಟ್ಟಲ್ಲ ಎಂದ ದಾವೇದಾರರು!

ಸಾರಾಂಶ

ಅಯೋಧ್ಯೆ ತೀರ್ಪು ಮುಸ್ಲಿಂ ಪರ ಬಂದರೆ ಮಸೀದಿ ಕಟ್ಟಲ್ಲ| ಸದ್ಯಕ್ಕೆ ಕಾಂಪೌಂಡ್‌ ಕಟ್ಟುತ್ತೇವೆ: ಮುಸ್ಲಿಂ ಪ್ರತಿವಾದಿಗಳು

ಅಯೋಧ್ಯೆ[ಅ.20]: ಇಲ್ಲಿನ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಸುಪ್ರೀಂ ಕೋರ್ಟ್‌ ತೀರ್ಪಿಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ತೀರ್ಪು ಯಾರ ಪರ ಬರಲಿದೆ ಎಂಬ ಬಗ್ಗೆ ಚರ್ಚೆಗಳೂ ಜೋರಾಗಿ ನಡೆದಿವೆ. ಆದರೆ, ‘ತೀರ್ಪು ಮುಸ್ಲಿಂ ಪಕ್ಷಗಳ ಬಂದರೂ ಕೂಡಲೇ ಬಾಬ್ರಿ ಮಸೀದಿ ನಿರ್ಮಾಣವನ್ನು ಕೈಗೆತ್ತಿಕೊಳ್ಳಬಾರದು. ಏಕೆಂದರೆ ಕೋಮು ಸೌಹಾರ್ದತೆ ಕಾಪಾಡುವುದು ಮುಖ್ಯ’ ಎಂದು ಖುದ್ದು ಮುಸ್ಲಿಂ ದಾವೇದಾರರು ಅಭಿಪ್ರಾಯಪಟ್ಟಿದ್ದಾರೆ.

ಕೊನೆಗೂ ಮುಗೀತು ವಿಚಾರಣೆ: ಅಯೋಧ್ಯೆ ತೀರ್ಪಿಗೆ ದಿನಗಣನೆ!

‘ಅಯೋಧ್ಯೆ ತೀರ್ಪು ನಮ್ಮ ಪರವೇ ಬಂತು ಎಂದುಕೊಳ್ಳೋಣ. ಆದರೆ ಅಲ್ಲಿ ಮಸೀದಿ ನಿರ್ಮಿಸಬಾರದು. ಕೇವಲ ಕಾಂಪೌಂಡ್‌ ಗೋಡೆಯನ್ನು ನಿರ್ಮಿಸಿ ಖಾಲಿ ಜಾಗ ಬಿಟ್ಟುಬಿಡಬೇಕು’ ಎಂದು ಪ್ರಕರಣದ ಅರ್ಜಿದಾರ ಹಾಜಿ ಮೆಹಬೂಬ್‌ ಹೇಳಿದ್ದಾರೆ.

ಸಂಧಾನಕ್ಕೆ ನಾವು ಸಿದ್ಧವಿಲ್ಲ: ಸುನ್ನಿ ಮಂಡಳಿ ಪ್ರಸ್ತಾವಕ್ಕೆ ಉಳಿದ ಮುಸ್ಲಿಂ ಪಕ್ಷಗಳ ತಿರಸ್ಕಾರ!

ಮತ್ತಿತರ ದಾವೆದಾರರಾದ ಮುಫ್ತಿ ಹಸ್ಬುಲ್ಲಾ ಬಾದ್‌ಶಾ ಖಾನ್‌ ಹಾಗೂ ಮೊಹಮ್ಮದ್‌ ಉಮರ್‌ ಅವರು, ‘ಕೋಮು ಸೌಹಾರ್ದವನ್ನು ನಾವು ಮೊದಲು ಗಮನದಲ್ಲಿ ಇರಿಸಿಕೊಳ್ಳಬೇಕು. ಮಸೀದಿ ನಿರ್ಮಾಣವನ್ನು ಕೂಡಲೇ ಆರಂಭಿಸಬಾರದು. ನಿರ್ಮಾಣ ಮುಂದೂಡಬೇಕು. ಶಾಂತಿ ಕಾಪಾಡುವತ್ತ ಲಕ್ಷ್ಯ ವಹಿಸಬೇಕು’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ