ಸಂಸತ್ ಭವನ ಸೇರಿದಂತೆ ಇರಾನ್ ರಾಜಧಾನಿಯ 2 ಕಡೆ ಉಗ್ರ ದಾಳಿ: 7 ಸಾವು

Published : Jun 07, 2017, 12:24 PM ISTUpdated : Apr 11, 2018, 12:48 PM IST
ಸಂಸತ್ ಭವನ ಸೇರಿದಂತೆ ಇರಾನ್ ರಾಜಧಾನಿಯ 2 ಕಡೆ ಉಗ್ರ ದಾಳಿ: 7 ಸಾವು

ಸಾರಾಂಶ

ಇರಾನ್'ನ ಸಂಸತ್ ಮೇಲೆ ಮೂವರು ಉಗ್ರರು ದಾಳಿ ನಡೆಸಿರುವ ಶಂಕೆ ಇದೆ. ಕೆಲ ವರದಿಗಳು ಮೂವರು ಉಗ್ರರ ದಾಳಿ ಎಂದು ತಿಳಿಸಿದರೆ, ಕೆಲ ವರದಿಗಳಲ್ಲಿ ಒಬ್ಬನೇ ಉಗ್ರನ ದಾಳಿಯಾಗಿದೆ ಎಂದಿದೆ. ಒಂದು ವರದಿ ಪ್ರಕಾರ, ಬಂದೂಕು ಹೊಂದಿದ್ದ ವ್ಯಕ್ತಿಯೊಬ್ಬ ಸಂಸತ್'ವೊಳಕ್ಕೆ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದಾನೆ.​

ಟೆಹೆರಾನ್, ಇರಾನ್(ಜೂನ್ 07): ಇರಾನ್ ರಾಜಧಾನಿ ಟೆಹರಾನ್'ನಲ್ಲಿ ಸಂಸತ್ ಭವನ ಸೇರಿದಂತೆ ಎರಡು ಕಡೆ ಉಗ್ರಗಾಮಿಗಳು ದಾಳಿ ಎಸಗಿದ್ದಾರೆ. ಈ ದಾಳಿಯಲ್ಲಿ ಐವರು ದಾಳಿಕೋರರು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಸಂಸತ್ ಭವನ ಹಾಗೂ ಆಯತುಲ್ಲಾ ಖೊಮೇನಿ ಅವರ ಸಮಾಧಿ ಸ್ಥಳಗಳ ಮೇಲೆ ಶಂಕಿತ ಉಗ್ರರ ದಾಳಿಯಾಗಿದೆ. ಒಂದೇ ಗಂಟೆಯ ಅಂತರದಲ್ಲಿ ಈ ಎರಡು ಕಡೆ ದಾಳಿಯಾಗಿದೆ.

ಸಂಸತ್ ಭವನಕ್ಕೆ ಮೂವರು ವ್ಯಕ್ತಿಗಳು ದಾಳಿ ಮಾಡಿದ್ದಾರೆ. ವ್ಯಕ್ತಿಯೊಬ್ಬ ಭವನದೊಳಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ಒಬ್ಬ ಭದ್ರತಾ ಸಿಬ್ಬಂದಿ ಬಲಿಯಾಗುತ್ತಾರೆ. ಇನ್ನೂ ಹಲವು ನಾಗರಿಕರು ಗಾಯಗೊಳ್ಳುತ್ತಾರೆ. ದಾಳಿ ಮಾಡಿದ ಮೂವರ ಪೈಕಿ ಒಬ್ಬನ ಬಳಿ ಪಿಸ್ತೂಲ್ ಇದ್ದರೆ, ಇನ್ನಿಬ್ಬರ ಬಳಿ ಎಕೆ-47 ರೈಫಲ್ ಇತ್ತೆನ್ನಲಾಗಿದೆ. ಸಂಸತ್ ಭವನದ ಒಳಗೆ ಮತ್ತೊ ಹೊರಗೆ ಕೂಡಲೇ ಬಿಗಿಭದ್ರತೆ ಒದಗಿಸಿದ ಭದ್ರತಾ ಪಡೆಗಳು ಎಲ್ಲಾ ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ.

ಮತ್ತೊಂದು ಘಟನೆಯಲ್ಲಿ ಆಯತೊಲ್ಲಾ ಖೊಮೇನಿ ಸಮಾಧಿ ಸ್ಥಳದ ಆವರಣಕ್ಕೆ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಸೂಸೈಡ್ ಬಾಂಬರ್ ದಾಳಿ ನಡೆಸಿರುವುದು ವರದಿಯಾಗಿದೆ. ಅಲ್ಲಿ, ಕೆಲಸ ಮಾಡುತ್ತಿದ್ದ ಕಾರ್ಮಿಕ ಬಲಿಯಾಗಿದ್ದಾರೆ. ಇನ್ನೂ ಹಲವು ಗಾಯಗೊಂಡಿದ್ದಾರೆ.

ಈ ಎರಡು ದಾಳಿಗಳನ್ನು ಯಾರು ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ದಾಳಿಗೆ ಕಾರಣವೂ ತಿಳಿದುಬಂದಿಲ್ಲ. ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ. ರಿಪಬ್ಲಿಕ್ ಟಿವಿ ಸೇರಿದಂತೆ ಕೆಲ ಮಾಧ್ಯಮಗಳ ವರದಿ ಪ್ರಕಾರ, ಇರಾನ್ ದಾಳಿಗಳ ಹಿಂದೆ ಐಸಿಸ್ ಕೈವಾಡವಿರುವ ಶಂಕೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ