
ಬೆಳಗಾವಿ: ಎಂಇಎಸ್'ನ ನಾಡದ್ರೋಹಿ ಹೇಳಿಕೆಗಳು ಮುಂದುವರಿಯುತ್ತಲೇ ಇವೆ. ನಿನ್ನೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲೂ ಎಂಇಎಸ್ ಜನನಾಯಕರ ಉದ್ಧಟತನದ ಪ್ರದರ್ಶನವಾಯ್ತು. ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಖಾನಾಪುರ ಎಂಇಎಸ್ ಶಾಸಕ ಅರವಿಂದ್ ಪಾಟೀಲ್, "ನಾವು ಕರ್ನಾಟಕದಲ್ಲಿ ಇರೋಲ್ಲ.. ಮಹಾರಾಷ್ಟ್ರಕ್ಕೆ ಸೇರೋದು ಪಕ್ಕಾ" ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು.
ಜನರ ಸಮಸ್ಯೆ ಬಗ್ಗೆ ಚರ್ಚಿಸೋದು ಬಿಟ್ಟು ಜನನಾಯಕ ಪಾಟೀಲ್ ಸಾಹೇಬ್ರು ನಾಡದ್ರೋಹಿ ಹೇಳಿಕೆ ನೀಡಿ ಉದ್ಧಟತನ ತೋರಿದರು. ಆದರೆ ಇದಕ್ಕೆ ಸಚಿವ ರಮೇಶ್ ಜಾರಕಿಹೊಳಿ, "ನಾವು ಮಹಾಜನ ಆಯೋಗದ ವರದಿಯನ್ನು ಒಪ್ಪಿದ್ದೇವೆ. ನೀವೇನೇ ಹೊಸದು ಮಾಡಿದ್ರು ನಾವ್ ಒಪ್ಪಲ್ಲ" ಎಂದರು.
ಇನ್ನು, ಅಥಣಿ ಶಾಸಕ ಲಕ್ಷ್ಮಣ ಸವದಿ ಕೂಡ ಸಚಿವರ ಮಾತಿಗೆ ದನಿ ಗೂಡಿಸಿ ಖಾನಾಪುರ ಎಂದೆಂದು ಕರ್ನಾಟಕದಲ್ಲೇ ಉಳಿಯುವಂತದ್ದು ಎಂದು ಹೇಳಿದರು.
ಒಟ್ಟಿನಲ್ಲಿ, ಬೆಳಗಾವಿಯಲ್ಲಿ ಎಂಇಎಸ್ ನಾಯಕರ ಉದ್ಧಟತನದ ಹೇಳಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ಕೆಡಿಪಿ ಸಭೆಯಲ್ಲಿ ಅರವಿಂದ್ ಪಾಟೀಲ್ ನೀಡಿರುವ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ .
- ಮಂಜುನಾಥ್ ಎಚ್.ಪಾಟೀಲ್, ಸುವರ್ಣ ನ್ಯೂಸ್, ಬೆಳಗಾವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.