ನಟ ಚೇತನ್​ ಸಿನಿಮಾ ಜೀವನಕ್ಕೆ ಕುತ್ತು ತಂತು MeToo

Published : Oct 29, 2018, 10:17 PM IST
ನಟ ಚೇತನ್​ ಸಿನಿಮಾ ಜೀವನಕ್ಕೆ ಕುತ್ತು ತಂತು MeToo

ಸಾರಾಂಶ

  ಘೋಷಿಸಿದ್ದ ಶ್ರತಿ ಹರಿಹರಿಹರನ್ ಪರ ಬ್ಯಾಟಿಂಗ್ ಮಾಡಿದ ನಟ ಚೇತನ್​ ಅವರ ಸಿನಿಮಾ ಜೀವನಕ್ಕೆ ಮೀಟೂ ಅಭಿಯಾನ ಕುತ್ತು ತಂದಿದೆ. ಏನದು ಅಂತೀರಾ? ಇಲ್ಲಿದೆ ಡಿಟೇಲ್ಸ್.

ಬೆಂಗಳೂರು, [ಅ.29]: ನಟ ಅರ್ಜುನ್​ ವಿರುದ್ಧ ಮೀಟೂ ಆರೋಪಕ್ಕೆ ನಟ ಚೇತನ್ ಕೈಜೋಡಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಅವರು ಫಿಲಂ ಚೇಂಬರ್ ಗೆ ನಟ ಚೇತನ್ ವಿರುದ್ಧ ದೂರು ನೀಡಿದ್ದಾರೆ.  ಚೇತನ್ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅಭಿನಯದ ‘ಪ್ರೇಮಬರಹ’ ಚಿತ್ರಕ್ಕೆ 10 ಲಕ್ಷ ರೂ. ಮುಂಗಡವಾಗಿ ಪಡೆದಿದ್ದರು. 

#MeToo ಗೆ ಟ್ವಿಸ್ಟ್! ಶೃತಿ, ಚೇತನ್ ವಿರುದ್ಧ ಉದ್ಯಮಿಯಿಂದ ಸ್ಫೋಟಕ ಮಾಹಿತಿ!

ಈಗ ಮುಂಗಡ ಹಣವನ್ನ ವಾಪಸ್ ಕೊಡದೇ ಚೇತನ್ ಸತಾಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಈ ಹಣವನ್ನ ವಾಪಸ್ ಕೊಡಿಸುವಂತೆ ಫಿಲಂ ಚೇಂಬರ್ ಗೆ ಶಿವಾರ್ಜುನ್  ದೂರು ಸಲ್ಲಿಸಿದ್ದಾರೆ.

ಅರ್ಜುನ್ ಸರ್ಜಾ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ ನಟ ಚೇತನ್!

ನಟಿ ಶ್ರುತಿ ಹರಿಹರನ್​ ಮಾಡಿದ್ದ #MeToo ಆರೋಪ ಅವರನ್ನಷ್ಟೇ ಅಲ್ಲ, ಬದಲಾಗಿ ಅವರ ಬೆನ್ನಿಗೆ ನಿಂತವರನ್ನೂ ಬಿಡದೇ ಸುತ್ತಿಕೊಳ್ಳುತ್ತಿದೆ. ಅರ್ಜುನ್​ ಸರ್ಜಾ ಮೇಲಿನ ಲೈಂಗಿಕ ಆರೋಪ ಸಂಬಂಧ ನಟ ಚೇತನ್​ ತಮ್ಮ ಫೈಯರ್​ ಸಂಸ್ಥೆ ಮೂಲಕ ಶ್ರುತಿ ಬೆನ್ನಿಗೆ ನಿಂತಿದ್ದರು. ಇದರಿಂದ ಅವರು ಸರ್ಜಾ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಅವರ ಮೇಲೆ ಹಲವು ಆರೋಪಗಳು ಕೇಳಿಬಂದಿದ್ವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!