ಬಿಜೆಪಿ ಕ್ರಮ ವಿರೋಧಿಸಿದರೆ ದೇಶದ್ರೋಹಿ ಅಥವಾ ಪಾಕಿಸ್ತಾನಿ ಪಟ್ಟ: ಆಝಾದ್ ಕಿಡಿ

Published : Nov 17, 2016, 03:09 PM ISTUpdated : Apr 11, 2018, 12:42 PM IST
ಬಿಜೆಪಿ ಕ್ರಮ ವಿರೋಧಿಸಿದರೆ ದೇಶದ್ರೋಹಿ ಅಥವಾ ಪಾಕಿಸ್ತಾನಿ ಪಟ್ಟ: ಆಝಾದ್ ಕಿಡಿ

ಸಾರಾಂಶ

ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರವನ್ನು ಮುಂದುವರೆಸಿದ ಆಝಾದ್, ದೇಶದ ಇತಿಹಾಸದಲ್ಲಿ ಹಿಂದೆಂದೂ ಅನುಭವಿಸದಷ್ಟು ಕಷ್ಟವನ್ನು ಜನರು ಸರ್ಕಾರದ ಹೊಸ ಘೋಷಣೆಯಿಂದಾಗಿ ಈಗ ಅನುಭವಿಸುತ್ತಿದ್ದಾರೆ, ಎಂದಿದ್ದಾರೆ.

ನವದೆಹಲಿ (ನ.17): ಬಿಜೆಪಿ ಕ್ರಮವನ್ನು ಪ್ರಶ್ನಿಸಿದವರೆಲ್ಲರನ್ನೂ ಒಂದೋ ದೇಶವಿರೋಧಿ ಅಥವಾ ಪಾಕಿಸ್ತಾನಿ ಎಂದು ಬಿಂಬಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಗುಲಾಮ್ ನಬೀ ಆಝಾದ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರವನ್ನು ಮುಂದುವರೆಸಿದ ಆಝಾದ್, ದೇಶದ ಇತಿಹಾಸದಲ್ಲಿ ಹಿಂದೆಂದೂ ಅನುಭವಿಸದಷ್ಟು ಕಷ್ಟವನ್ನು ಜನರು ಸರ್ಕಾರದ ಹೊಸ ಘೋಷಣೆಯಿಂದಾಗಿ ಈಗ ಅನುಭವಿಸುತ್ತಿದ್ದಾರೆ, ಎಂದಿದ್ದಾರೆ.

ಕಾಳಧನ ವಿರುದ್ಧದ ಸಮರದಲ್ಲಿ ನಾವು ಸರ್ಕಾರವನ್ನು ಬೆಂಬಲಿಸುತ್ತೇವೆ. ವಿದೇಶಗಳಲ್ಲಿ ಶೇಖರಿಸಿಡಲಾದ ಕಾಳಧನವನ್ನು ಮೊದಲು ಹಿಂದೆ ತರಲಿ. ವಿದೇಶದ ಬ್ಯಾಂಕುಗಳಲ್ಲಿ ಸಂಗ್ರಹಿಸಲಾಗಿರುವ ಕಪ್ಪುಹಣವನ್ನುಹಿಂದೆ ತರುವುದಾಗಿಯೂ, ದೇಶದ ಪ್ರತಿಯೊಬ್ಬನಿಗೂ 15 ಲಕ್ಷ ನೀಡುವುದಾಗಿಯೂ ಪ್ರಧಾನಿ ಆಶ್ವಾಸನೆಯಿತ್ತಿದ್ದರು. ಆದರೆ ಈವರೆಗೆ ಒಂದು ಪೈಸೆಯನ್ನೂ ಕೂಡಾ ತಂದಿಲ್ಲ, ಎಂದೂ ಆಝಾದ್ ಟೀಕಿಸಿದ್ದಾರೆ.

ಕಪ್ಪುಹಣದ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಪ್ರಶ್ನಿಸಲಾಗುತ್ತದೆ ಎಂಬುವುದನ್ನು ಅರಿತು ಇಂತಹ ಕ್ರಮವನ್ನು ತುರ್ತಾಗಿ ತೆಗೆದುಕೊಂಡಿದ್ದಾರೆಂದು ಆಝಾದ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ