ಶಾಸ್ತ್ರಿ ಮಾದರಿಯಲ್ಲೇ ದೇಶದ ಮತ್ತೊಬ್ಬ ನಾಯಕನ ಸಾವು ಸಂಭವಿಸಲಿದೆ

Published : Sep 29, 2017, 08:48 PM ISTUpdated : Apr 11, 2018, 12:47 PM IST
ಶಾಸ್ತ್ರಿ ಮಾದರಿಯಲ್ಲೇ ದೇಶದ ಮತ್ತೊಬ್ಬ ನಾಯಕನ ಸಾವು ಸಂಭವಿಸಲಿದೆ

ಸಾರಾಂಶ

ಹಾವೇರಿಯ ರಾಣೆಬೆನ್ನೂರಿನ ದೇವರ ಗುಡ್ಡದಲ್ಲಿ ನಡೆದ ಕಾರ್ಣಿಕದಲ್ಲೂ ಭವಿಷ್ಯ ನುಡಿದ ಕಾರ್ಣಿಕ, ಗೊರವಪ್ಪ ನಾಗಪ್ಪ ಉಮಿ  ‘ಈ ವರ್ಷ ಮನುಕುಲಕ್ಕೆ ಅಘಾತವಾಗುವ ಸಾಧ್ಯತೆ’, ‘ಘಾತವಾಸಿತಲೇ ಪರಾಕ್’ ಅಂತ ಭವಿಷ್ಯ ನುಡಿದಿದ್ದಾರೆ.

ಹಾವೇರಿ(ಸೆ.29): ಲಾಲ್ ​ಬಹದ್ಧೂರ್​ ಶಾಸ್ತ್ರಿ ಅವರ ಸಾವಿನ ಮಾದರಿಯಲ್ಲೇ ಈ ದೇಶದಲ್ಲಿ ಮತ್ತೊಬ್ಬ ನಾಯಕನ ಸಾವು ಸಂಭವಿಸುತ್ತೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 

ದಸರಾ ಜಂಬೂ ಸವಾರಿ ಉತ್ಸವಕ್ಕೆ ಆಗಮಿಸಿದ್ದ  ವೇಳೆ, ನಾನು ಆಗ ಚೋಟು ಗೇಣಿನ ವೀರ. ಭಾರತದ ಕುವರ ತಕ್ಕಡಿಯ ಊರಿನಲ್ಲಿ ವಿಷಪಾನ ಮಾಡುತ್ತಾನೆ ಎಂದು ಹೇಳಿದ್ದೆ,  ಆಗ ತಾಷ್ಕೆಂಟ್'ನಲ್ಲಿ ಲಾಲ್ ​ಬಹದ್ದೂರ್​ ಶಾಸ್ತ್ರಿ ಅವರ ಸಾವು ಸಂಭವಿಸಿತ್ತು. ಈಗ ಅಂಥದ್ದೇ ಘಟನೆ ಮರುಕಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದಿದ್ದಾರೆ.  

ಇದರ ನಡುವಲ್ಲೆ  ಹಾವೇರಿಯ ರಾಣೆಬೆನ್ನೂರಿನ ದೇವರ ಗುಡ್ಡದಲ್ಲಿ ನಡೆದ ಕಾರ್ಣಿಕದಲ್ಲೂ ಭವಿಷ್ಯ ನುಡಿದ ಕಾರ್ಣಿಕ, ಗೊರವಪ್ಪ ನಾಗಪ್ಪ ಉಮಿ  ‘ಈ ವರ್ಷ ಮನುಕುಲಕ್ಕೆ ಅಘಾತವಾಗುವ ಸಾಧ್ಯತೆ’, ‘ಘಾತವಾಸಿತಲೇ ಪರಾಕ್’ ಅಂತ ಭವಿಷ್ಯ ನುಡಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀರವೈಶ ಲಿಂಗಾಯತ ಸಮಾಜ ಒಡೆದಾಳಲು ಯತ್ನ: ವಿಜಯೇಂದ್ರ
ತಾಕತ್ತಿದ್ರೆ ನೋಟಲ್ಲಿರುವ ಗಾಂಧಿ ಚಿತ್ರ ತೆಗೆಯಿರಿ: ಕೇಂದ್ರಕ್ಕೆ ಡಿಕೆಶಿ ಸವಾಲು!