
ನವದೆಹಲಿ(ಜ.25): ಅಮಾನ್ಯಗೊಂಡ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆಗೆ ಮತ್ತೊಂದು ಅವಕಾಶ ನೀಡಲು ‘ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಚಿಂತನೆ ನಡೆಸಿದೆ. ಆದರೆ, ಅಲ್ಪ ಪ್ರಮಾಣದ ಮೊತ್ತವನ್ನಷ್ಟೇ ಠೇವಣಿ ಇಡಲು ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಡಿ.30ರ ಗಡುವು ಮುಗಿಯುವುದರೊಳಗೆ ನೋಟುಗಳನ್ನು ಠೇವಣಿ ಇಡಲು ವಿಲರಾದವರು ಮತ್ತೊಂದು ಅವಕಾಶ ನೀಡುವಂತೆ ಆರ್ಬಿಐಗೆ ಕೋರಿಕೊಂಡಿದ್ದಾರೆ. ಇಂತಹ ಮನವಿಗಳ ಸುರಿಮಳೆಯೇ ಆಗುತ್ತಿರುವ ಕಾರಣ, ಆರ್ಬಿಐ ಸಣ್ಣ ಮೊತ್ತ ಅಂದರೆ ರೂ.3 ಸಾವಿರದಷ್ಟು ಮೊತ್ತವನ್ನು ಠೇವಣಿ ಇಡಲು ಕೆಲವು ದಿನಗಳವರೆಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಅವಕಾಶದ ದುರುಪಯೋಗ ಆಗಕೂಡದ ಎಂಬ ಉದ್ದೇಶದಿಂದ ಆರ್ಬಿಐ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಗಡುವು ಮುಗಿದ ಬಳಿಕವೂ ಎಷ್ಟೋ ಮಂದಿ ತಮ್ಮ ಮನೆಯಲ್ಲಿ ಅಲ್ಲಿಲ್ಲಿ ಇಟ್ಟ ನೋಟುಗಳನ್ನು ತಂದು ಆರ್ಬಿಐ ಮುಂದೆ ಸರತಿಯಲ್ಲಿ ನಿಂತಿದ್ದಾರೆ. ಪುಸ್ತಕವೊಂದರ ಒಳಗೆ ರೂ.1 ಸಾವಿರದ ನೋಟು ಸಿಕ್ಕಿದೆ ಎಂದು ವ್ಯಕ್ತಿಯೊಬ್ಬರು ಆರ್ಬಿಐಗೆ ‘ಧಾವಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.