ರೆಸಾರ್ಟ್ ಮೇಲೆ ದಾಳಿ ಪ್ರಕರಣ: ಪೊಲೀಸರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಅನಿಲ್ ಲಾಡ್

Published : Oct 29, 2016, 08:30 AM ISTUpdated : Apr 11, 2018, 12:44 PM IST
ರೆಸಾರ್ಟ್ ಮೇಲೆ ದಾಳಿ ಪ್ರಕರಣ: ಪೊಲೀಸರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಅನಿಲ್ ಲಾಡ್

ಸಾರಾಂಶ

ಬಳ್ಳಾರಿ ಎಸ್‌ಪಿ ಆರ್.ಚೇತನ್, ಕೂಡ್ಲಿಗಿ ಡಿವೈಎಸ್‌ಪಿ ಸವಿಶಂಕರ್ ನಾಯ್ಕ್, ತೋರಣಗಲ್ ಪಿಎಸ್‌ಐ ಸಂಡೂರು ಪಿಎಸ್‌ಐ ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಬಳ್ಳಾರಿ ಶಾಸಕ ಅನಿಲ್ ಲಾಡ್ ಇದೀಗ ದೂರು ದಾಖಲಿಸಿ, ಕೋರ್ಟ್ ಕಟಕಟೆಗೆ ಎಳೆದಿದ್ದಾರೆ.

ಬಳ್ಳಾರಿ(ಅ. 29): ಸರ್ಚ್ ವಾರೆಂಟ್ ಇಲ್ಲದೇ ತನ್ನ ರೆಸಾರ್ಟ್ ಪರಿಶೀಲಿಸಿದ ಕಾರಣ ಪೊಲೀಸ್ ಇಲಾಖೆಯ ವಿರುದ್ಧ ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಂಡೂರಿನ ಬಳಿಯಿರುವ ಅನಿಲ್ ಲಾಡ್ ಒಡೆತನದ ಅಮೇಜಿಂಗ್ ವ್ಯಾಲಿ ರೆರ್ಸಾಟ್‌'ನಲ್ಲಿ ಇಸ್ಪೀಟ್ ಜೂಜು ನಡೆಯುತ್ತಿದೆ ಎಂದು ಎಸ್‌'ಪಿಗೆ ದೂರು ಬಂದಿತ್ತು. ಹೀಗಾಗಿ ಕೂಡ್ಲಿಗಿ ಡಿವೈಎಸ್‌ಪಿ ನೇತೃತ್ವದ ತಂಡ ರೆಸಾರ್ಟ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು. ಆದ್ರೆ ಪರಿಶೀಲನೆ ನಂತರ ಅದೊಂದು ಹುಸಿ ಕರೆ ಎಂಬುದು ಪೊಲೀಸ್ ಅಧಿಕಾರಿಗಳಿಗೆ ಅರಿವಾಗಿದೆ.

ತಮ್ಮ ಒಡೆತನದ ರೆಸಾರ್ಟ್ ಮೇಲೆ ವಾರೆಂಟ್ ಇಲ್ಲದೆ ದಾಳಿ ಮಾಡಿ ಪೊಲೀಸ್ ಅಧಿಕಾರಿಗಳು ದಾಂಧಲೆ ಮಾಡಿದ್ದಾರೆಂದು ಶಾಸಕ ಅನಿಲ್ ಲಾಡ್ ಕೂಡ್ಲಿಗಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಾಧೀಶರು ನವಂಬರ್ 4 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಬಳ್ಳಾರಿ ಎಸ್‌ಪಿ ಆರ್.ಚೇತನ್, ಕೂಡ್ಲಿಗಿ ಡಿವೈಎಸ್‌ಪಿ ಸವಿಶಂಕರ್ ನಾಯ್ಕ್, ತೋರಣಗಲ್ ಪಿಎಸ್‌ಐ ಸಂಡೂರು ಪಿಎಸ್‌ಐ ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಬಳ್ಳಾರಿ ಶಾಸಕ ಅನಿಲ್ ಲಾಡ್ ಇದೀಗ ದೂರು ದಾಖಲಿಸಿ, ಕೋರ್ಟ್ ಕಟಕಟೆಗೆ ಎಳೆದಿದ್ದಾರೆ. ಸ್ಪೀಕರ್ ಬಳಿಯೂ ಸಹ ಹಕ್ಕುಚ್ಯುತಿ ಮಂಡನೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚುನಾವಣೆಗೂ ಮೊದಲೇ ಪ.ಬಂಗಾಳದಲ್ಲಿ ಬಿಜೆಪಿಗೆ ಶಾಕ್ ನೀಡಿದ ಮಮತಾ ಬ್ಯಾನರ್ಜಿ
ಮೂರುವರೆ ದಶಕಗಳಿಂದ ಇದ್ದ ಒಳ ಮೀಸಲಾತಿಗಾಗಿ ಹೋರಾಟಕ್ಕೆ ಜಯ ಸಿಕ್ಕಿದೆ: ಸಚಿವ ಮುನಿಯಪ್ಪ