ಗೋದಾವರಿ ಬೋಟ್ ದುರಂತ: ಮತ್ತೆ 6 ಶವ ಪತ್ತೆ, ಸತ್ತವರ ಸಂಖ್ಯೆ 34ಕ್ಕೆ ಏರಿಕೆ!

Published : Sep 19, 2019, 08:33 AM IST
ಗೋದಾವರಿ ಬೋಟ್ ದುರಂತ: ಮತ್ತೆ 6 ಶವ ಪತ್ತೆ, ಸತ್ತವರ ಸಂಖ್ಯೆ 34ಕ್ಕೆ ಏರಿಕೆ!

ಸಾರಾಂಶ

ಗೋದಾವರಿ ಹಡಗು ದುರಂತ: ಮತ್ತೆ ಆರು ಶವಗಳ ಶೋಧ ಸತ್ತವರ ಸಂಖ್ಯೆ 34ಕ್ಕೆ ಏರಿಕೆ|  ಇನ್ನೂ 13 ಜನರ ಪತ್ತೆಗಾಗಿ ಶೋಧ ಕಾರ್ಯಾಚರಣೆ

ಅಮರಾವತಿ[ಸೆ.19]: ಆಂಧ್ರಪ್ರದೇಶದ ಗೋದಾವರಿ ನದಿಯಲ್ಲಿ ಬೋಟ್‌ ಮುಳುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೆ 6 ಶವಗಳನ್ನು ಪತ್ತೆ ಮಾಡಲಾಗಿದ್ದು, ದುರಂತದಲ್ಲಿ ಮೃತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

ಪತ್ತೆಯಾಗಿರುವ ಇನ್ನೂ 13 ಜನರ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಎಸ್‌ಡಿಆರ್‌ಎಫ್‌ ತಂಡ ಮುಂದುವರೆಸಿದೆ. ದುರಂತದಲ್ಲಿ 23 ಪುರುಷರು, 8 ಮಹಿಳೆಯರು ಮತ್ತು 3 ಮಕ್ಕಳು ಮೃತಪಟ್ಟಿದ್ದಾರೆ.

ಪ್ರವಾಸಿ ತಾಣವೊಂದಕ್ಕೆ 8 ಜನ ಸಿಬ್ಬಂದಿ ಒಳಗೊಂಡು 73 ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಭಾನುವಾರ ಗೋದಾವರಿ ನದಿಯಲ್ಲಿ ಬಂಡೆಗಲ್ಲೊಂದಕ್ಕೆ ಡಿಕ್ಕಿ ಸಂಭವಿಸಿ ಮುಳುಗಿತ್ತು. ಈ ವೇಳೆ 73 ಪ್ರವಾಸಿಗರ ಪೈಕಿ 26 ಜನರು ಬದುಕುಳಿದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು