ಅಯ್ಯೋ ವಿಧಿಯೇ..! ಫೋನ್’ನಲ್ಲಿ ಮಾತನಾಡುವ ಮುನ್ನ ಈ ಸ್ಟೋರಿ ಓದಿ

Published : Jan 29, 2020, 05:02 PM IST
ಅಯ್ಯೋ ವಿಧಿಯೇ..! ಫೋನ್’ನಲ್ಲಿ ಮಾತನಾಡುವ ಮುನ್ನ ಈ ಸ್ಟೋರಿ ಓದಿ

ಸಾರಾಂಶ

ರೆಡ್ಡಿ ಪೋಷಕರು ಕಳೆದ ಕೆಲವರ್ಷಗಳ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ರೆಡ್ಡಿ ಸರ್ಕಾರ ವಿಕಲಾಂಗಚೇತನರಿಗೆ ನೀಡುವ ಒಂದು ಸಾವಿರ ರುಪಾಯಿ ಪಿಂಚಣಿಯಲ್ಲೇ ಜೀವನ ಸಾಗಿಸುತ್ತಿದ್ದರು.

ಹೈದರಾಬಾದ್[ಆ.01]: ಮೊಬೈಲ್ ಫೋನ್ ಚಾರ್ಜ್’ಗೆ ಹಾಕಿ ಮಾತನಾಡುವಾಗ ಅವಘಡ ಸಂಭವಿಸುವ ಘಟನೆಗಳನ್ನು ಕೇಳುತ್ತಲೇ ಇರುತ್ತೇವೆ. ಅಂತಹದ್ದೇ ಘಟನೆಯೊಂದು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ವಾಗುಪಲ್ಲಿಯಲ್ಲಿ ನಡೆದಿದೆ.

31 ವರ್ಷದ ವಿಕಲಾಂಗಚೇತನ ವ್ಯಕ್ತಿಯಾದ ಚಂಗು ಮಸ್ತಾನ್ ರೆಡ್ಡಿ ಮೊಬೈಲ್ ಫೋನ್ ಚಾರ್ಜ್’ಗೆ ಹಾಕಿ ಮಾತನಾಡುತ್ತಿದ್ದಾಗ ವಿದ್ಯುತ್ ಅವಘಡ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ವಾಸನೆ ಗಮನಿಸಿದ ಸ್ಥಳೀಯರು ಮಸ್ತಾನ ರೆಡ್ಡಿ ಮನೆಗೆ ಬಂದಾಗ ವಿದ್ಯುತ್ ಶಾಕ್’ನಿಂದ ಬಿದ್ದಿದ್ದ ಆತನನ್ನು ಆಸ್ಫತ್ರೆಗೆ ಕರೆದೊಯ್ಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ರೆಡ್ಡಿ ಪೋಷಕರು ಕಳೆದ ಕೆಲವರ್ಷಗಳ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ರೆಡ್ಡಿ ಸರ್ಕಾರ ವಿಕಲಾಂಗಚೇತನರಿಗೆ ನೀಡುವ ಒಂದು ಸಾವಿರ ರುಪಾಯಿ ಪಿಂಚಣಿಯಲ್ಲೇ ಜೀವನ ಸಾಗಿಸುತ್ತಿದ್ದರು.

ಒಟ್ಟಿನಲ್ಲಿ ಮೊಬೈಲ್ ಚಾರ್ಜ್ ಹಾಕಿ ಫೋನ್’ನಲ್ಲಿ ಮಾತನಾಡುವವರು ಇನ್ನಾದರೂ ಎಚ್ಚರದಿಂದ ಇರುವುದು ಕ್ಷೇಮ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ