ಮಳೆ ಪರಿಣಾಮ ಕಾರು ನಿಲ್ಲಿಸಿ ಮೆಟ್ರೋ ಏರಿದ ಅನಂತ್, ಜೋಶಿ

Published : Oct 14, 2017, 09:19 AM ISTUpdated : Apr 11, 2018, 12:50 PM IST
ಮಳೆ ಪರಿಣಾಮ ಕಾರು ನಿಲ್ಲಿಸಿ ಮೆಟ್ರೋ ಏರಿದ ಅನಂತ್, ಜೋಶಿ

ಸಾರಾಂಶ

ಅನಂತಕುಮಾರ್ ಅವರು ಲಾಲ್‌'ಬಾಗ್ ಇಳಿದು ಸಮೀಪದಲ್ಲಿರುವ ತಮ್ಮ ಮನೆಗೆ ಕಾಲ್ನಡಿಗೆಯಲ್ಲೇ ತೆರಳಿದರು. ಜೋಶಿ ಅವರು ಬನಶಂಕರಿಯಲ್ಲಿ ಇಳಿದು ಮನೆ ಸೇರಿದರು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆ ಮತ್ತು ಅದರಿಂದ ಉಂಟಾದ ವಾಹನಗಳ ಸಂಚಾರ ದಟ್ಟಣೆಯ ಪರಿಣಾಮ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರ ಮೇಲೂ ಉಂಟಾಯಿತು. ಬಿಜೆಪಿ ಕಚೇರಿಯಲ್ಲಿದ್ದ ಉಭಯ ನಾಯಕರು ಶೇಷಾದ್ರಿಪುರದ ಬಳಿಯ ಮೆಟ್ರೋ ನಿಲ್ದಾಣದಲ್ಲಿ ಕಾರು ಬಿಟ್ಟು ಮೆಟ್ರೋ ರೈಲು ಏರಿದರು. ಅನಂತಕುಮಾರ್ ಅವರು ಲಾಲ್‌'ಬಾಗ್'ನಲ್ಲಿ ಇಳಿದು ಅಲ್ಲೇ ಸಮೀಪದಲ್ಲಿರುವ ತಮ್ಮ ಮನೆಗೆ ಕಾಲ್ನಡಿಗೆಯಲ್ಲೇ ತೆರಳಿದರು. ಜೋಶಿ ಅವರು ಬನಶಂಕರಿಯಲ್ಲಿ ಇಳಿದು ಸುರಕ್ಷಿತವಾಗಿ ಮನೆ ಸೇರಿದರು ಎಂದು ಮೂಲಗಳು ತಿಳಿಸಿವೆ.

epaperkannadaprabha.com

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ