ಸಿದ್ದರಾಮಯ್ಯ ಅಲ್ಲ, ’ಛಿದ್ರ’ ರಾಮಯ್ಯ ಎಂದು ವ್ಯಂಗ್ಯವಾಡಿದ ಅನಂತ್ ಕುಮಾರ್ ಹೆಗಡೆ

Published : Mar 25, 2018, 10:35 PM ISTUpdated : Apr 11, 2018, 12:40 PM IST
ಸಿದ್ದರಾಮಯ್ಯ ಅಲ್ಲ, ’ಛಿದ್ರ’ ರಾಮಯ್ಯ ಎಂದು ವ್ಯಂಗ್ಯವಾಡಿದ ಅನಂತ್ ಕುಮಾರ್ ಹೆಗಡೆ

ಸಾರಾಂಶ

ಪಾಕಿಸ್ತಾನಕ್ಕೆ ಪಾಠ ಕಲಿಸುವುದು ದೊಡ್ಡ ಸವಾಲಲ್ಲ.  ದೇಶದಲ್ಲಿ ಛಿದ್ರ ’ರಾಮಯ್ಯನಂತವರಿಗೆ ಮೊದಲು ಪಾಠ ಕಲಿಸಬೇಕಾಗಿದೆ‌ ಎಂದು ಯಾದಗಿರಿ ವಿರಾಟ್ ಸಮಾವೇಶದಲ್ಲಿ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಯಾದಗಿರಿ (ಮಾ. 25):  ಪಾಕಿಸ್ತಾನಕ್ಕೆ ಪಾಠ ಕಲಿಸುವುದು ದೊಡ್ಡ ಸವಾಲಲ್ಲ.  ದೇಶದಲ್ಲಿ ಛಿದ್ರ ’ರಾಮಯ್ಯನಂತವರಿಗೆ ಮೊದಲು ಪಾಠ ಕಲಿಸಬೇಕಾಗಿದೆ‌ ಎಂದು ಯಾದಗಿರಿ ವಿರಾಟ್ ಸಮಾವೇಶದಲ್ಲಿ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ತಂದೆಯೆ ಇರಲಿ, ತಾಯಿಯೆ ಇರಲಿ ನಮ್ಮ ಸಮಾಜವನ್ನು ಒಡೆಯಲೂ ಬಿಡಲ್ಲ. ಅದಕ್ಕೆ ಕಡಿವಾಣ ಹಾಕ್ತೇವೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಎಂದಿದ್ದಾರೆ. ಭಾಷಣದ ಉದ್ದಕ್ಕೂ ಸಿಎಂ ಸಿದ್ದರಾಮಯ್ಯಗೆ ಛಿದ್ರ ರಾಮಯ್ಯ, ಛಿದ್ರ ರಾಮಯ್ಯ ಎಂದು ವ್ಯಂಗ್ಯವಾಡಿದ್ದಾರೆ.

ಧರ್ಮಗೋಸ್ಕರ ಯಾರು ತಮ್ಮ ಮೈಗೆ ಬೆಂಕಿ ಹಚ್ಚಿಕೊಳ್ಳುತ್ತಾರೋ ಅಂತವರ ಜೊತೆ ನೀವೆಲ್ಲರೂ ಇರಬೇಕು.  ಪಾಕಿಸ್ತಾನ ವಿಭಜನೆ ಆದಾಗ ಅದೆಷ್ಟೋ  ಹಿಂದುಗಳು ಅತ್ಯಾಚಾರ, ಅನ್ಯಾಯಕ್ಕೆ ಒಳಗಾದರು. ಹಿಂದೂ ಸಮಾಜ ಅನಾಥ ಆದ್ರೆ ನಿಮ್ಮ ಮನೆತನಕ್ಕೆ ಗೌರವವಿಲ್ಲ. ಅನಾಥವಾಗಲು ಬಿಡಬೇಡಿ ಎಂದಿದ್ದಾರೆ.

23 ಹಿಂದು ಮಕ್ಕಳ ಕೊಂದಾಗ ಎಲ್ಲೋಗಿದ್ದರು ಲಂಕೇಶ್ ವಾದಿಗಳು, ವಿಚಾರವಾದಿ, ಬುದ್ದಿ ಜೀವಿಗಳು?  ಈ ದೇಶವನ್ನು ಹಾಳ ‌ಮಾಡಿದ್ದೆ ಈ ಎಡಬಿಡಂಗಿಗಳು, ದೇಶ ದ್ರೋಹಿಗಳು. ಅಪರೂಪಕ್ಕೆ ಒಬ್ಬ ಮೆಚ್ಚುವಂತವ ನಾಯಕ ಬಂದಿದ್ದಾರೆ ಅವರಿಗೆ ಬೆಂಬಲಿಸಬೇಕಾಗಿದೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಪಿಎಲ್ ಕಾರ್ಡ್ ಆದಾಯ ಮಿತಿ 1.80 ಲಕ್ಷಕ್ಕೆ ಏರಿಕೆ? ಸಚಿವ ಮುನಿಯಪ್ಪ ಕೊಟ್ಟ ಬಿಗ್ ಅಪ್ಡೇಟ್ ಏನು?
ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆಗೆ ಕರವೇ ಕೆಂಡ; ನಾರಾಯಣ ಗೌಡರ ಹೋರಾಟಕ್ಕೆ ಮಣಿದು ಹೊಸ ಅಧಿಸೂಚನೆ ಹೊರಡಿಸಿದ ಇಲಾಖೆ!