ಬೆಂಗಳೂರು ರಸ್ತೆಗೆ ಖ್ಯಾತ ಉದ್ಯಮಿ ಫಿದಾ!

By Suvarna Web DeskFirst Published Mar 23, 2018, 4:33 PM IST
Highlights

ಬೆಂಗಳೂರು ರಸ್ತೆಗೆ ಖ್ಯಾತ ಉದ್ಯಮಿಯಿಂದ ಪ್ರಶಂಸೆ

ಬೆಂಗಳೂರು: ಕೆಲದಿನಗಳ ಹಿಂದೆ ಲಾಸ್ ಏಂಜಲೀಸ್ ಟೈಮ್ಸ್’ನಲ್ಲಿ ಕರ್ನಾಟಕದ ಪಾವಗಡ ಸೌರ ವಿದ್ಯುತ್ ಕೇಂದ್ರಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಇದೀಗ ದೇಶದ ಖ್ಯಾತ ಉದ್ಯಮಿ ಹಾಗೂ ಕಾರು ತಯಾರಕ ಆನಂದ್ ಮಹೀಂದ್ರಾ ಬೆಂಗಳೂರಿನ ಟೆಂಡರ್ ಶ್ಯೂರ್ ರಸ್ತೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಆಡಿರು ಆನಂದ್ ಮಹೀಂದ್ರಾ, ನಾನು ಬೆಂಗಳೂರಿನ ಸೈಂಟ್ ಮಾರ್ಕ್ಸ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್’ಗೆ ಭೇಟಿ ನೀಡಿದ್ದೆ. ಪಾದಾಚಾರಿಗಳಿಗೆ ರಸ್ತೆಗಳನ್ನು ಮರಳಿಪಡೆಯುವ ಚಳುವಳಿ ಆರಂಭವಾಗಿದೆಯೆಂದು ಅನಿಸುತ್ತದೆ. ಈ ನಡೆ ಪ್ರಶಾಂಸಾರ್ಹ. ನಾನು ಕಾರು ತಯಾರಕನಾಗಿರಬಹುದು, ಆದರೆ ನಗರಗಳು ಜನಸ್ನೇಹಿಯಾಗಿರಬೇಕು ಎಂಬುವುದರಲ್ಲಿ ವಿಶ್ವಾಸವಿಟ್ಟವನು ನಾನು, ಆ ನಿಟ್ಟಿನಲ್ಲಿ ‘ಪಾದಾಚಾರಿ ಮಾತ್ರ’ ಸೌಲಭ್ಯಗಳು ಮುಖ್ಯ. ಎಂದು ಹೇಳಿದ್ದಾರೆ.

In Bengaluru I visited Church St & St.Marks road because I had seen this tweet. A movement seems afoot to reclaim key streets for pedestrians. I applaud this move. I may be a car-maker but I believe one way of making our cities liveable is to make some parts pedestrian-only https://t.co/iWi5NwSmzl

— anand mahindra (@anandmahindra)
click me!