
ಅಂಬರೀಶ್ ಲೋಕಸಭೆಗೆ ಆಯ್ಕೆಯಾಗಿ ಬಂದರೂ, ಎಂದಿಗೂ ಹಮ್ಮುಬಿಮ್ಮು ಬಿಟ್ಟು ಮನವಿ ಪತ್ರ ತೆಗೆದುಕೊಂಡು ಯಾರ ಬಳಿಯೂ ಹೋದವರಲ್ಲ. ಆದರೆ ಸುಮಲತಾ ಸಂಸತ್ ಅಧಿವೇಶನದ ಮೊದಲನೇ ದಿನದಿಂದಲೇ ಫುಲ್ ಆಕ್ಟಿವ್ ಆಗಿದ್ದಾರೆ.
‘ಕೈ’ ಶಾಸಕರ ರಾಜೀನಾಮೆ: ದೇವೇಗೌಡ್ರ ಲೆಕ್ಕಾಚಾರವೇ ಬೇರೆ!
ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್, ಸದಾನಂದ ಗೌಡರನ್ನು ಪ್ರತ್ಯೇಕವಾಗಿ ಭೇಟಿಯಾಗಿರುವ ಸುಮಲತಾ, ಲೋಕಸಭೆಯಲ್ಲಿ ಬಿಜೆಪಿ ಸಂಸದರೊಂದಿಗೆ ಜಾಸ್ತಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಸುಮಲತಾ ಬಿಜೆಪಿ ಸೇರುವ ಆಲೋಚನೆ ಹೊಂದಿರುವುದು ಇನ್ನೂ ಊಹಾಪೋಹವಷ್ಟೆ.
ಅಶೋಕ ಹೋಟೆಲ್ನಲ್ಲಿ ಪ್ರಧಾನಿ ಕೊಟ್ಟ ಡಿನ್ನರ್ ಮೀಟಿಂಗ್ನಲ್ಲಿ ಸುಮಲತಾ ಹೋಗಿ ನಮಸ್ಕಾರ ಹೇಳಿದಾಗ, ಮೋದಿ ಸಾಹೇಬರು ಪ್ರತಿ ನಮಸ್ಕಾರ ಹೇಳಿದರಾದರೂ, ಹೊರಗಡೆ ಸುದ್ದಿ ಆದಂತೆ ಅಲ್ಲಿ ಯಾವುದೇ ಮಾತುಕತೆ ನಡೆದಿಲ್ಲ.
ಮೂಲಗಳ ಪ್ರಕಾರ ಸುಮಲತಾ, ಪ್ರಧಾನಿ ಮೋದಿ ಅವರ ಒನ್ ಟು ಒನ್ ಭೇಟಿಗಾಗಿ ಪ್ರಯತ್ನ ಪಡುತ್ತಿದ್ದಾರೆ. ಒಂದು ವೇಳೆ ಆಗಸ್ಟ್ನಲ್ಲಿ ಕಾವೇರಿ ಕಾವು ಏರಿದರೆ ಸುಮಲತಾ ಪಾತ್ರ ಮಹತ್ವದ್ದು. ಆಗ ಸುಮಲತಾ ಏನು ಮಾಡುತ್ತಾರೆ ಎನ್ನುವುದು ಮಂಡ್ಯ ಪಾಲಿಟಿಕ್ಸ್ ದೃಷ್ಟಿಯಿಂದ ಮುಖ್ಯ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ಪ್ರತಿನಿಧಿ
ರಾಜಕಾರಣದ ಸುದ್ಧಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.