ಹೆಂಡ ಕುಡಿಯಲು ಭಿಕ್ಷೆ ಬೇಡುತ್ತಿದ್ದಾನೆ ಇಲ್ಲೊಬ್ಬ ಟೀಚರ್..!

Published : Mar 24, 2018, 03:15 PM ISTUpdated : Apr 11, 2018, 12:53 PM IST
ಹೆಂಡ ಕುಡಿಯಲು ಭಿಕ್ಷೆ ಬೇಡುತ್ತಿದ್ದಾನೆ ಇಲ್ಲೊಬ್ಬ ಟೀಚರ್..!

ಸಾರಾಂಶ

ತಿಂಗಳು ಸಂಬಳ ಎಲ್ಲಾ ಎಣ್ಣೆಗಾಗಿಯೇ ಖರ್ಚು ಮಾಡುತ್ತಿದ್ದಾನೆ. ಕುಡಿಯಲು ಹಣ ಇಲ್ಲದೇ ಇದ್ದಾಗ ಮಾರುಕಟ್ಟೆ, ಬಸ್ ನಿಲ್ದಾಣದಲ್ಲಿ ಭಿಕ್ಕೆ ಬೇಡುತ್ತಾನೆ. ನಿನ್ನೆ ರಾತ್ರಿ ಟವೆಲ್-ಬನಿಯನ್ ಹಾಕಿಕೊಂಡು  ಬಸ್ ನಿಲ್ದಾಣದಲ್ಲೇ ಮಲಗಿದ್ದಾನೆ.

ಪಾವಗಡ(ಮಾ.24): ಶಿಕ್ಷಕ ಸಮೂಹವೇ ತಲೆತಗ್ಗಿಸುವಂತಹ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ.

ಕುಮಾರಲಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕ ನಾಗೇಂದ್ರಪ್ಪ ಕುಡಿತದ ಚಟಕ್ಕೆ ದಾಸನಾಗಿ ಭಿಕ್ಷೆ ಬೇಡುತ್ತಿದ್ದಾನೆ. ದಿನನಿತ್ಯ ಮದ್ಯಪಾನ ಮಾಡಿಕೊಂಡೇ ಶಾಲೆಗೆ ಬರುವ ಈತ, ನಶೆಯಲ್ಲೇ ಪಾಠ ಮಾಡುತ್ತಾನೆ ಎನ್ನಲಾಗಿದೆ.

ತಿಂಗಳು ಸಂಬಳ ಎಲ್ಲಾ ಎಣ್ಣೆಗಾಗಿಯೇ ಖರ್ಚು ಮಾಡುತ್ತಿದ್ದಾನೆ. ಕುಡಿಯಲು ಹಣ ಇಲ್ಲದೇ ಇದ್ದಾಗ ಮಾರುಕಟ್ಟೆ, ಬಸ್ ನಿಲ್ದಾಣದಲ್ಲಿ ಭಿಕ್ಕೆ ಬೇಡುತ್ತಾನೆ. ನಿನ್ನೆ ರಾತ್ರಿ ಟವೆಲ್-ಬನಿಯನ್ ಹಾಕಿಕೊಂಡು  ಬಸ್ ನಿಲ್ದಾಣದಲ್ಲೇ ಮಲಗಿದ್ದಾನೆ.

ಕನಕಲುಬಂಡಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೂ ಇದೇ ಕಾರಣಕ್ಕೆ ಅಮಾನತ್ತಾಗಿದ್ದ. ಈಗ ಹಳೇ ಚಾಳಿಯನ್ನು ಮುಂದುವರಿಸಿ ಮತ್ತೆ ಸಿಕ್ಕಿಬಿದ್ದಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ