
ನಿಜಾಮಾಬಾದ್(ಜು.25): ಆರ್ಎಸ್ಎಸ್ ನನ್ನ ‘15 ನಿಮಿಷ ಪೊಲೀಸರನ್ನು ಹಿಂಪಡೆಯಿರಿ..’ಹೇಳಿಕೆಯನ್ನು ಸ್ಮರಿಸುತ್ತಿದ್ದು, ನನ್ನ ಹೇಳಿಕೆಯಿಂದ ಈಗಲೂ ನಡುಗುತ್ತಿದೆ ಎಂದು ಎಐಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ ಹೇಳಿದ್ದಾರೆ.
ನಿಜಾಮಾಬಾದ್’ನಲ್ಲಿ ಮಾತನಾಡಿರುವ ಅಕ್ಬರುದ್ದೀನ್ ಒವೈಸಿ, ಹೆದರುವವರನ್ನು ಕಂಡರೆ ಜನ ಹೆದರಿಸುತ್ತಾರೆ. ಅದರಂತೆ ಹೆದರಿಸುವವರನ್ನು ಕಂಡರೆ ಜನ ಹೆದರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಆರ್ಎಸ್ಎಸ್ ಈಗಲೂ ತಮ್ಮ 15 ನಿಮಿಷ ಉಲ್ಲೇಖದ ಭಾಷಣ ಕೇಳಿ ಹೆದರುತ್ತದೆ. ತಮ್ಮ ಭಾಷಣವನ್ನು ಸ್ಮರಿಸುತ್ತಾ ಬೆವರುತ್ತದೆ ಎಂದು ಒವೈಸಿ ಪ್ರತಿಪಾದಿಸಿದ್ದಾರೆ.
2012ರಲ್ಲಿ ತೆಲಂಗಾಣದ ನಿರ್ಮಲ್’ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಅಕ್ಬರುದ್ದೀನ್ ಒವೈಸಿ, ಈ ದೇಶದಿಂದ ಕೇವಲ 15 ನಿಮಿಷ ಪೊಲೀಸರನ್ನು ಹಿಂಪಡೆದರೆ ಹಿಂದೂ-ಮುಸ್ಲಿಂರಲ್ಲಿ ಯಾರಿಗೆ ಹೆಚ್ಚು ತಾಕತ್ತು ಇದೆ ಎಂಬುದನ್ನು ತೋರಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.