ಅಜ್ಮೀರ್ ಬಾಂಬ್ ಸ್ಫೋಟ: ಸ್ವಾಮಿ ಅಸೀಮಾನಂದ್ ಸೇರಿದಂತೆ ಇಬ್ಬರಿಗೆ ಖುಲಾಸೆ

Published : Mar 08, 2017, 12:07 PM ISTUpdated : Apr 11, 2018, 12:45 PM IST
ಅಜ್ಮೀರ್ ಬಾಂಬ್ ಸ್ಫೋಟ: ಸ್ವಾಮಿ ಅಸೀಮಾನಂದ್ ಸೇರಿದಂತೆ ಇಬ್ಬರಿಗೆ ಖುಲಾಸೆ

ಸಾರಾಂಶ

2007 ರ ಅಜ್ಮೀರ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ್ ಸೇರಿದಂತೆ ಇಬ್ಬರಿಗೆ ಎನ್ ಐಎ ವಿಶೇಷ ನ್ಯಾಯಾಲಯ ಖುಲಾಸೆ ನೀಡಿದೆ. ದೇವೇಂದ್ರ ಗುಪ್ತಾ, ಭಾವೇಶ್ ಪಟೇಲ್ ಹಾಗೂ ಸುನೀಲ್ ಜೋಷಿ (ಮೃತಪಟ್ಟಿದ್ದಾರೆ) ಈ ಮೂವರನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ.

ನವದೆಹಲಿ (ಮಾ.08): 2007 ರ ಅಜ್ಮೀರ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ್ ಸೇರಿದಂತೆ ಇಬ್ಬರಿಗೆ ಎನ್ ಐಎ ವಿಶೇಷ ನ್ಯಾಯಾಲಯ ಖುಲಾಸೆ ನೀಡಿದೆ. ದೇವೇಂದ್ರ ಗುಪ್ತಾ, ಭಾವೇಶ್ ಪಟೇಲ್ ಹಾಗೂ ಸುನೀಲ್ ಜೋಷಿ (ಮೃತಪಟ್ಟಿದ್ದಾರೆ) ಈ ಮೂವರನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ.

ಭಾವೇಶ್ ಪಟೇಲ್ ಹಾಗೂ ದೇವೇಂದ್ರ ಗುಪ್ತಾರಿಗೆ 1 ಲಕ್ಷ ಜುಲ್ಮಾನೆಯನ್ನು ವಿಧಿಸಿದ್ದು ಶಿಕ್ಷೆಯ ಪ್ರಮಾಣವನ್ನು ಮಾ.16 ರಂದು ಪ್ರಕಟಿಸಲಿದೆ.

ರಕ್ಷಣಾ ಇಲಾಖೆ ಮತ್ತು ಪ್ರಾಸಿಕ್ಯೂಶನ್ ಸಲ್ಲಿಸಿದ ದಾಖಲೆಗಳ ಪರಿಶೀಲನೆಗೆ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ ಎಂದು ಫೆಬ್ರವರಿಯಲ್ಲಿ ನಡೆಯಬೇಕಾಗಿದ್ದ ವಿಚಾರಣೆಯನ್ನು ನ್ಯಾ. ದಿನೇಶ್ ಗುಪ್ತಾ ಮುಂದೂಡಿದ್ದರು. ಪ್ರಕರಣವನ್ನು ರಾಜಸ್ಥಾನದ ಎಟಿಎಸ್ ಗೆ ವಹಿಸಲಾಗಿತ್ತು. ತದನಂತರ ಎನ್ ಐಗೆ ವರ್ಗಾವಣೆ ಮಾಡಲಾಗಿದೆ.

ಕ್ವಾಜಾ ಮೋನುದ್ದೀನ್ ಚಿಷ್ಟಿ ದರ್ಗಾದಲ್ಲಿ 2007. ಅಕ್ಟೋಬರ್ 11 ರಂದು ರಂಜಾನ್ ವೇಳೆ ಬಾಂಬ್ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿದ್ದು 17 ಮಂದಿ ಗಾಯಗೊಂಡಿದ್ದರು. 149 ಮಂದಿ ಈ ಘಟನೆಗೆ ಸಾಕ್ಷಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!