
ಅಹಮದಬಾದ್ನಲ್ಲಿ ನಡೆದ ಕಬಡ್ಡಿ ವಿಶ್ವಕಪ್ ಫೈನಲ್ನಲ್ಲಿ ಇರಾನ್ ವಿರುದ್ಧ ಭಾರತ 38-29 ಅಂಕಗಳಿಂದ ಭರ್ಜರಿ ಜಯ ದಾಖಲಿಸುವ ಮೂಲಕ ಮೂರನೇ ಸಲ ವಿಶ್ವಕಪ್ ಎತ್ತಿಹಿಡಿಯಿತು.
ಕಬಡ್ಡಿ ವಿಶ್ವಕಪ್ ಆರಂಭದಲ್ಲೇ ಉಭಯ ತಂಡಗಳು ರಕ್ಷಣಾತ್ಮಕ ಆಟದಿಂದ ಗಮನಸೆಳೆಯುವುದರ ಜೊತೆ ರೈಡಿಂಗ್ಕ್ಕಿಂತ ಹೆಚ್ಚು ಡಿಫೆನ್ಸ್ಗೆ ಹೆಚ್ಚಿನ ಒತ್ತು ನೀಡಿದವು. ಮಿರಾಜ್ ಶೇಕ್ ಉತ್ತಮ ರೈಡಿಂಗ್ನಿಂದಾಗಿ ಇರಾನ್ ಆರಂಭದಲ್ಲೇ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು.
ಮೊದಲಾರ್ಧದ ಅಂತ್ಯಕ್ಕೆ ಭಾರತ 13-18 ಅಂಕಗಳಿಂದ ಐದು ಅಂಕಗಳ ಹಿನ್ನಡೆ ಅನುಭವಿಸಿದರೂ ದ್ವಿತೀಯಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮುನ್ನಡೆ ಪಡೆಯಿತು. ಅಜಯ್ ಠಾಕೂರ್ ಉತ್ತಮ ರೈಡ್ಗಳ ಮೂಲಕ ಇರಾನ್ ಪಡೆಯನ್ನು ಕಟ್ಟಿ ಹಾಕಿದರು.
ಅಂತಿಮವಾಗಿ ಭಾರತ 38-29 ಅಂಕಗಳಿಂದ ಜಯ ದಾಖಲಿಸಿತು. ಮೂರನೇ ಸಲ ಭಾರತ ವಿಶ್ವಕಪ್ ಎತ್ತಿಹಿಡಿಯುವಲ್ಲಿ ಸಫಲವಾಯಿತು. ಉತ್ತಮ ಆಟ ಪ್ರದರ್ಶಿಸಿದ ಅಜಯ್ ಠಾಕೂರ್ ಸರಣಿ ಶ್ರೇಷ್ಠ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಟ್ರೋಫಿ ಎತ್ತಿಹಿಡಿದ ಅನುಪ್ ಕುಮಾರ್ ಪಡೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿತು.
ಸರಣಿ ಶ್ರೇಷ್ಠ ಮತ್ತು ಪಂದ್ಯ ಶ್ರೇಷ್ಠ: ಅಜಯ್ ಠಾಕೂರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.