
ಬೆಂಗಳೂರು: ಬೆಂಗಳೂರಿನಿಂದ ಬಳ್ಳಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 7ರ ದೇವನಹಳ್ಳಿ ಟೊಲ್ ಪ್ಲಾಜಾದಲ್ಲಿ ಭಾನುವಾರದಿಂದಲೇ ಪರಿಷ್ಕೃತ ಟೋಲ್ ದರ ಜಾರಿಯಾಗಲಿದ್ದು, ವಾಹನ ಸವಾರರಿಗೆ 5 ಶುಲ್ಕ ಹೆಚ್ಚಳದ ಬಿಸಿ ತಟ್ಟಲಿದೆ.
2018ರ ಏ.1ರಿಂದ 2019 ಮಾ.31ರವರೆಗೆ ಪರಿಷ್ಕೃತ ಶುಲ್ಕ ಪಡೆಯಲು ನವಯುಗ ದೇವನಹಳ್ಳಿ ಟೊಲ್ ವೇ ಪ್ರೆವೇಟ್ ಲಿ.ಗೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿದ್ದು, ಒಂದು ವರ್ಷದ ಕಾಲ ಪರಿಷ್ಕೃತ ದರ ಜಾರಿಯಲ್ಲಿರಲಿದೆ.
ಪ್ರಸ್ತುತ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಹೊಗುವ ವಾಹನಗಳು ವಿಮಾನ ನಿಲ್ದಾಣದಿಂದ ಹಿಂತಿರುಗುವಾಗ 125 ರು. ಶುಲ್ಕ ಪಾವತಿಸಲಾಗುತ್ತಿತ್ತು. ಏ.1ರಿಂದ 5 ರು. ಹೆಚ್ಚಳವಾಗಲಿದ್ದು ಕಾರು, ಜೀಪು ಹಾಗೂ ವ್ಯಾನ್ಗಳು 130 ರು.ಗಳನ್ನು ಪಾವತಿಸಬೇಕಾಗಿದೆ.
ವಿಮಾನ ನಿಲ್ದಾಣಕ್ಕೆ ಇತ್ತಿಚೆಗಷ್ಟೇ ಅಭಿವೃದ್ಧಿಪಡಿಸಿರುವ ಪರ್ಯಾಯ ರಸ್ತೆಯಿಂದಾಗಿ ದೇವನಹಳ್ಳಿ ಟೋಲ್ ಆದಾಯ ದಿಢೀರ್ ಕುಸಿತವಾಗಿದೆ. ಈ ಕಾರಣದಿಂದಾಗಿ ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳಿಂದಲೂ ಶುಲ್ಕ ಪಡೆಯಲು ನವಯುಗ ದೇವನಹಳ್ಳಿ ಟೊಲ್ ವೇ ಸಂಸ್ಥೆ ಚಿಂತನೆ ನಡೆಸಿತ್ತು ಎಂದು ಸ್ಥಳೀಯ ವಾಹನ ಚಾಲಕರ ಆರೋಪವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.