ಕೊನೆಗೂ ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ಸಿಕ್ತು ಗ್ರೀನ್ ಸಿಗ್ನಲ್

Published : Oct 14, 2018, 08:22 AM IST
ಕೊನೆಗೂ ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ಸಿಕ್ತು ಗ್ರೀನ್ ಸಿಗ್ನಲ್

ಸಾರಾಂಶ

ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಯಾವಾಗ? ಏನು? ಎನ್ನುವ ವಿವರ ಇಲ್ಲಿದೆ.

ಬೆಂಗ​ಳೂರು, [ಅ. 14]: ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. 

ನಿಗ​ಮ ಮಂಡಳಿ ನೇಮ​ಕಾತಿ ಹಾಗೂ ಸಚಿವ ಸಂಪುಟ ವಿಸ್ತ​ರಣೆ ಪ್ರಕ್ರಿ​ಯೆ​ಯನ್ನು ಉಪ ಚುನಾ​ವಣೆ ನಂತರ ನಡೆ​ಸು​ವಂತೆ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರಿಗೆ ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚನೆ ನೀಡಿ​ದ್ದಾರೆ ಎಂದು ಮೂಲ​ಗಳು ತಿಳಿ​ಸಿ​ವೆ.

ಎಚ್‌​ಎ​ಎಲ್‌ ನಿವೃತ್ತ ಉದ್ಯೋ​ಗಿ​ಗ​ಳೊಂದಿಗೆ ಸಂವಾದ ನಡೆ​ಸಲು ಶನಿ​ವಾರ ನಗ​ರಕ್ಕೆ ಆಗ​ಮಿ​ಸಿದ್ದ ರಾಹುಲ್‌ ಗಾಂಧಿ ಅವ​ರನ್ನು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರು ಕುಮಾ​ರ​ಕೃಪ ಅತಿಥಿ ಗೃಹದಲ್ಲಿ ಭೇಟಿ ಮಾಡಿ​ದರು. 

ಈ ವೇಳೆ ನಿಗಮ -ಮಂಡಳಿ ಹಾಗೂ ಸಂಪುಟ ವಿಸ್ತ​ರಣೆ ವಿಚಾ​ರ​ವನ್ನು ಅವರು ರಾಹುಲ್‌ ಗಾಂಧಿ ಬಳಿ ಪ್ರಸ್ತಾ​ಪಿ​ಸಿ​ದರು ಎನ್ನ​ಲಾ​ಗಿ​ದೆ. ಇದಕ್ಕೆ ರಾಹುಲ್‌ ಗಾಂಧಿ ಅವರು ಉಪ ಚುನಾ​ವಣೆ ಮುಗಿ​ಯು​ತ್ತಿ​ದ್ದಂತೆಯೇ ಈ ಪ್ರಕ್ರಿ​ಯೆ​ಯನ್ನು ಕೈಗೊಳ್ಳಿ ಎಂದು ಸೂಚಿ​ಸಿ​ದರು ಎನ್ನ​ಲಾ​ಗಿದೆ. 

ಇದೇ ವೇಳೆ ಉಪ ಚುನಾ​ವ​ಣೆ​ಯಲ್ಲಿ ಮೈತ್ರಿ ಸಫ​ಲ​ವಾ​ಗ​ಬೇಕು ಹಾಗೂ ಎಲ್ಲಾ ಮೂರು ಲೋಕ​ಸಭಾ ಕ್ಷೇತ್ರ​ಗಳ ಉಪ ಚುನಾ​ವ​ಣೆ​ಯನ್ನು ಈ ಮೈತ್ರಿಕೂಟ ಗೆಲ್ಲ​ಬೇಕು. ಏಕೆಂದರೆ, ಈ ಉಪ ಚುನಾ​ವಣೆ ಮುಂದಿನ ಲೋಕ​ಸ​ಭೆ ಚುನಾ​ವ​ಣೆಯನ್ನು ಪ್ರಭಾ​ವಿ​ಸ​ಲಿದೆ. 

ಹೀಗಾಗಿ ಏನೇ ಭಿನ್ನಾ​ಭಿ​ಪ್ರಾ​ಯ​ಗಳು ಇದ್ದರೂ ಅದನ್ನು ಲಕ್ಷಿ​ಸದೆ ಉಪ ಚುನಾ​ವಣೆ ಗೆಲು​ವಿಗೆ ಮೈತ್ರಿಕೂಟದ ನಾಯ​ಕರು ಶ್ರಮಿ​ಸ​ಬೇಕು ಎಂದು ರಾಹುಲ್‌ ಹೇಳಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ನೇಮಕ!
ಚಿತ್ರದುರ್ಗದಲ್ಲಿ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಬರುವ 10 ಲಕ್ಷ ಜನರಿಗೆ ಊಟದ ವ್ಯವಸ್ಥೆ! ಊಟದ ಮೇನುವಿನಲ್ಲಿ ಏನಿದೆ?