ಕಾವೇರಿ: ವಿಶೇಷಾಧಿವೇಶನ ಬೇಡಿಕೆಯನ್ನು ತಿರಸ್ಕರಿಸಿದ ಎಐಎಡಿಎಂಕೆ

Published : Sep 24, 2016, 11:48 AM ISTUpdated : Apr 11, 2018, 01:01 PM IST
ಕಾವೇರಿ: ವಿಶೇಷಾಧಿವೇಶನ  ಬೇಡಿಕೆಯನ್ನು ತಿರಸ್ಕರಿಸಿದ ಎಐಎಡಿಎಂಕೆ

ಸಾರಾಂಶ

ಚೆನ್ನೈ (ಸೆ.24): ಕಾವೇರಿ ಜಲವಿವಾದದ ವಿಚಾರದಲ್ಲಿ ತಮಿಳುನಾಡು ಸರ್ಕಾರ ಕೂಡಾ ವಿಶೇಷಾಧಿವೇಶನ ಕರೆಯಬೇಕೆಂದು ಡಿಎಂಕೆ ವರಿಷ್ಠ ಕರುಣಾನಿಧಿ ಬೇಡಿಕೆಯನ್ನು ಏಐಏಡಿಎಂಕೆ ತಳ್ಳಿ ಹಾಕಿದೆ.

ಕಾವೇರಿ ವಿಚಾರದಲ್ಲಿ ಅಮ್ಮ ಸಾಧಿಸಿರುವ ನಿರಂತರ ಗೆಲುವು ಕರ್ನಾಟಕ ಮಾತ್ರವಲ್ಲದೇ ಕರುಣಾನಿಧಿಯವರನ್ನು ಕೂಡಾ ರೊಚ್ಚಿಗೆಬ್ಬಿಸಿದೆ ಎಂದು ಎಐಎಡಿಎಂಕೆ ಮುಖವಾಣಿ 'ನಮಡು ಎಂಜಿಆರ್' ಬರೆದುಕೊಂಡಿದೆ.

ಸರ್ವಪಕ್ಷ ಸಭೆ, ವಿಶೇಷ ಅಧಿವೇಶನದಂತಹ ಅರ್ಥಹೀನ ಬೇಡಿಕೆಗಳನ್ನು ಮುಂದಿಡುವ ಮೂಲಕ ತಾನು ಕೂಡಾ ಕಾವೇರಿ ಹಾಗೂ ತಮಿಳು ಜನರ ಹಿತಾಸಕ್ತಿ ಬಗ್ಗೆ ಕಳಕಳಿ ಹೊಂದಿದ್ದೇನೆಂದು ಕರುಣಾನಿಧಿ ತೋರ್ಪಡಿಸಬಯಸುತ್ತಿದ್ದಾರೆ ಎಂದು ಏಐಏಡಿಎಂಕೆ ಹೇಳಿದೆ.

ಕಾವೇರಿ ವಿಚಾರದಲ್ಲಿ ಜಯಾಲಲಿತಾ 'ಶಾಶ್ವತ ಗೆಲುವಿ'ನೆಡೆಗೆ ದಾಪುಗಾಲಿಡುತ್ತಿದ್ದಾರೆ,  ಅದನ್ನು ಕರುಣಾನಿಧಿಯವರಿಂದ ಸಹಿಸಿಕೊಳ್ಳಲಾಗುತ್ತಿಲ್ಲವೆಂದು ಏಐಏಡಿಎಂಕೆ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

5 ರಾಜ್ಯದ ಮತಪಟ್ಟಿ ಪ್ರಕಟ : 1 ಕೋಟಿ ಹೆಸರು ಡಿಲೀಟ್
ಯಹೂದಿ ನರಮೇಧ ನಡೆಸಿದ ತಂದೆ-ಮಗನಿಗೆ ಐಸಿಸ್‌ ಲಿಂಕ್‌ ದೃಢ