
ಬೆಂಗಳೂರು(ಸೆ.20): ಬೆಳಗಾದರೆ ಸಾಕು ಭಾರತೀಯರ ಮನೆ ಘಮ ಘಮ ವಾಸನೆ. ದೇವರ ಮನೆಯಿಂದ ಹೊರ ಬರುವ ಅಮ್ಮಂದಿರು ಜೊತೆಗೆ ಅಗರಬತ್ತಿಯ ಪರಿಮಳವನ್ನು ಇಡೀ ಮನೆ ತುಂಬ ಕೊಂಡೊಯ್ಯುತ್ತಾರೆ. ಅಗರಬತ್ತಿ ಇಲ್ಲದೇ ಭಾರತೀಯರಿಗೆ ಬೆಳಗಾವುದೇ ಇಲ್ಲ. ಅಗರಬತ್ತಿ ಭಾರತೀಯರ ಮನೆ, ಮನಗಳಲ್ಲಿ ಅಷ್ಟೊಂದು ಪ್ರಾಮುಖ್ಯತೆ ಪಡೆದಿದೆ.
ಆದರೆ ನಿಮಗೆ ಈಗ ಹೇಳಲು ಹೊರಟಿರುವ ಸುದ್ದಿ ಅಗರಬತ್ತಿಯ ಘಮ ಘಮ ಪರಿಮಳದ ಕುರಿತಲ್ಲ. ಅಗರಬತ್ತಿ ಹೊರಸೂಸುವ ಹೊಗೆಯ ಕುರಿತು. ಅಗರಬತ್ತಿಯ ಹೊಗೆ ಸಿಗರೇಟ್ ಹೊಗೆಗಿಂತ ಡೇಂಜರ್ ಎಂಬುದು ನೂತನ ಸಂಶೋಧನೆಯಿಂದ ಸಾಬೀತಾಗಿದೆ. ಅಗರಬತ್ತಿ ಹೊರಸೂಸುವ ಹೊಗೆಯಲ್ಲಿ ಕ್ಯಾನ್ಸರ್ಗೆ ಕಾರಣವಾಗುವ ಅಂಶಗಳಿವೆ ಎಂಬುದನ್ನು ಚೀನಾದ ವಿಶ್ವವಿದ್ಯಾಲಯವೊಂದರ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಅಗರಬತ್ತಿಯ ಹೊಗೆಯಲ್ಲಿ ಮೂರು ತೆರನಾದ ವಿಷಾನಿಲ ಇದ್ದು, ಮುಟಾಜೆನಿಕ್, ಜೆನೋಟಾಕ್ಸಿಕ್ ಮತ್ತು ಸೈಟೋಟಾಕ್ಸಿಕ್ ಎಂಬ ವಿಷಾನಿಲ ಕ್ಯಾನ್ಸರ್ಗೆ ಕಾರಣವಾಗುತ್ತವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಅಗರಬತ್ತಿಯ ಹೊಗೆ ಮನುಷ್ಯನ ಶ್ವಾಸಕೋಶದೊಳಗೆ ಹೊಕ್ಕು, ಅಲ್ಲಿ ರಾಸಾಯನಿಕ ಕ್ರಿಯೆಗೊಳಪಟ್ಟು ಕ್ಯಾನ್ಸರ್ ಬರಲು ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.