ಅನಂತ್‌ ಬಳಿ ಇದ್ದ ರಾಸಾಯನಿಕ ಗೊಬ್ಬರ ಖಾತೆ ಮತ್ತೆ ಕರ್ನಾಟಕಕ್ಕೆ ನೀಡಿದ ಮೋದಿ

By Web DeskFirst Published Nov 13, 2018, 8:03 PM IST
Highlights

ಕೇಂದ್ರ ಸಚಿವ ಅನಂತ್ ಕುಮಾರ್ ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ಅವರ ಬಳಿ ಇದ್ದ ಖಾತೆಯನ್ನು ಪ್ರಧಾನಿ ಮೋದಿ ಬೇರೆಯವರಿಗೆ ಹಂಚಿಕೆ ಮಾಡಿದ್ದಾರೆ.

ನವದೆಹಲಿ[ನ.13] ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ನಂತರ ಅವರ ಬಳಿ ಇದ್ದ ಖಾತೆಯನ್ನು ಬೇರೆಯವರಿಗೆ ನೀಡಲಾಗಿದೆ. ರಾಜ್ಯವನ್ನು ಪ್ರತಿನಿಧಿಸುವ ಸದಾನಂದ ಗೌಡರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿದೆ.

ಬಿಎಸ್‌ವೈ & ಅನಂತ್ ಜೋಡಿ ರಾಜ್ಯದಲ್ಲಿ ಕೇಸರಿ ಪಕ್ಷ ಕಟ್ಟಿದ ರೋಚಕ ಕಥೆ

ಅನಂತ್ ಕುಮಾರ್ ಹೊಂದಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಬೆಂಗಳೂರು ಉತ್ತರದ ಸಂಸದ, ಕೇಂದ್ರ ಅಂಕಿ ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದ ಗೌಡ ಅವರಿಗೆ ನೀಡಲಾಗಿದೆ. ಅನಂತ್ ಕುಮಾರ್ ಅವರು ನಿರ್ವಹಿಸುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಗಣಿಗಾರಿಕೆ ಸಚಿವ ನರೇಂದ್ರ ಸಿಂಗ್ ಅವರಿಗೆ ನೀಡಲಾಗಿದೆ.

Union Minister D. V. Sadananda Gowda be assigned the charge of Ministry of Chemicals & Fertilizers and Union Minister be assigned the charge of Ministry of Parliamentary Affairs in addition to their existing portfolio.

Read here: https://t.co/YvImSuxi69

— PIB India (@PIB_India)
click me!
Last Updated Nov 13, 2018, 8:25 PM IST
click me!