
ನವದೆಹಲಿ (ಮೇ.22): ವಿವಾದಾತ್ಮಕ ತ್ರಿವಳಿ ತಲಾಖ್ ಬಿಕ್ಕಟ್ಟು ಇನ್ನೂ ಮುಂದುವರೆದಿದ್ದು, ತ್ರಿವಳಿ ತಲಾಖ್ ನೀಡಬಾರದೆಂದು ವರನಿಗೆ ಕ್ವಾಜಿಗಳು ಸಲಹೆ ನೀಡಲಿದ್ದಾರೆ ಎಂದು ಮುಸ್ಲೀಂ ವೈಯಕ್ತಿಕ ಮಂಡಳಿ ಸುಪ್ರೀಂಕೋರ್ಟ್ನಲ್ಲಿಂದು ಹೇಳಿದೆ.
ಮದುವೆ ಮಾತುಕತೆ ಸಂದರ್ಭದಲ್ಲಿ ಕ್ವಾಜಿಗಳು ವರನಿಗೆ ಒಂದೇ ಸಲ 3 ಬಾರಿ ತಲಾಖ್ ಹೇಳಬಾರದೆಂದು ಸಲಹೆ ನೀಡಲಿದ್ದಾರೆ. ಇದು ಶರಿಯತ್ ಕಾನೂನಿನ ಪ್ರಕಾರ ಅನಪೇಕ್ಷಿತ ವಿಚ್ಚೇದನ ಪದ್ಧತಿ ಎಂದು ಮುಸ್ಲೀಂ ವೈಯಕ್ತಿಕ ಮಂಡಳಿ ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದೆ.
ತ್ರಿವಳಿ ತಲಾಖ್ ಗೆ ಸಾಂವಿಧಾನಿಕ ಮಹತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮೇ.18 ತೀರ್ಪನ್ನು ಕಾಯ್ದಿರಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.