ಶ್ರೀಗಳ ವಕಾಲತ್ತು; ಡಿಕೆಶಿಗೆ ಇಂಧನ ಖಾತೆ ಸಿಗುತ್ತಾ?

Published : Jun 05, 2018, 11:06 AM IST
ಶ್ರೀಗಳ ವಕಾಲತ್ತು; ಡಿಕೆಶಿಗೆ ಇಂಧನ ಖಾತೆ ಸಿಗುತ್ತಾ?

ಸಾರಾಂಶ

ಡಿ.ಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ. ಸಮುದಾಯದಲ್ಲಿ ತಪ್ಪು ಮಾಹಿತಿ ರವಾನೆಯಾಗಬಾರದು. ಜೆಡಿಎಸ್ ಇಂಧನ ಖಾತೆ ಉಳಿಸಿಕೊಂಡಿದೆ. ಡಿಕೆಶಿಗೆ ನಿರಾಸೆ ಎಂಬ ಸಂದೇಶ ಹೋಗಬಾರದು ಎಂಬ ಸಂದೇಶವನ್ನು  ಶ್ರೀಗಳು ನೀಡಿದ್ದಾರೆ.  ಹಾಗಾಗಿ ಕಾಂಗ್ರೆಸ್ ಗೆ ಮತ್ತೆ ಇಂಧನ ಖಾತೆ ಲಭ್ಯವಾಗುವ ಸಾಧ್ಯತೆ ಇದೆ.  

ಬೆಂಗಳೂರು (ಜೂ. 06): ಇಂಧನ ಖಾತೆ ಜೆಡಿಎಸ್ ಪಾಲಾದರೂ ಡಿ.ಕೆ ಶಿವಕುಮಾರ್ ಸುಮ್ಮನಾಗಿಲ್ಲ. ನಾನು ಏಕಾಂಗಿಯಲ್ಲ ಎನ್ನುವ ಮೂಲಕ ಎಚ್.ಡಿ ರೇವಣ್ಣಗೆ ನಾನು ಸುಮ್ಮನಿರಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಡಿಕೆಶಿ. 

ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳ ಬಳಿ ಇಂಧನ ಖಾತೆ ವಿಚಾರವನ್ನು ಮುಂದಿಟ್ಟಿದ್ದಾರೆ.  ಡಿ.ಕೆ ಶಿವಕುಮಾರ್ ಪರ ಶ್ರೀಗಳು ಜೆಡಿಎಸ್’ಗೆ ಸಂದೇಶ ರವಾನಿಸಿದ್ದಾರೆ. 

ಡಿ.ಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ. ಸಮುದಾಯದಲ್ಲಿ ತಪ್ಪು ಮಾಹಿತಿ ರವಾನೆಯಾಗಬಾರದು. ಜೆಡಿಎಸ್ ಇಂಧನ ಖಾತೆ ಉಳಿಸಿಕೊಂಡಿದೆ. ಡಿಕೆಶಿಗೆ ನಿರಾಸೆ ಎಂಬ ಸಂದೇಶ ಹೋಗಬಾರದು ಎಂಬ ಸಂದೇಶವನ್ನು  ಶ್ರೀಗಳು ನೀಡಿದ್ದಾರೆ.  ಹಾಗಾಗಿ ಕಾಂಗ್ರೆಸ್ ಗೆ ಮತ್ತೆ ಇಂಧನ ಖಾತೆ ಲಭ್ಯವಾಗುವ ಸಾಧ್ಯತೆ ಇದೆ. 

ಶ್ರೀಗಳ ಕಿವಿಮಾತನ್ನ ಕುಮಾರಸ್ವಾಮಿ ದೇವೇಗೌಡರಿಗೆ ತಲುಪಿಸಿದ್ದಾರೆ.  ಎಚ್.ಡಿ. ರೇವಣ್ಣ ಗೆ ತಿಳಿಹೇಳಿ ಎಂದು ಗೌಡರಿಗೆ ಎಚ್.ಡಿ.ಕೆ ಮನವಿ ಮಾಡಿದ್ದಾರೆ.  ಇದೀಗ ಇಂಧನ ಖಾತೆ ಕಾಂಗ್ರೆಸ್ ಗೆ ನೀಡುವ ಬಗ್ಗೆ ಜೆಡಿಎಸ್ ಒಳಗೆ ಬಿರುಸಿನ ಚರ್ಚೆ ಶುರುವಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ