ರಾಜಕೀಯ ಆಹ್ವಾನ ನೀಡಿದ ಗೃಹ ಸಚಿವರಿಗೆ ನಟ ಶಿವಣ್ಣ ಏನೆಂದರು ಗೊತ್ತೆ ?

Published : Sep 24, 2016, 09:01 PM ISTUpdated : Apr 11, 2018, 12:51 PM IST
ರಾಜಕೀಯ ಆಹ್ವಾನ ನೀಡಿದ ಗೃಹ ಸಚಿವರಿಗೆ ನಟ ಶಿವಣ್ಣ ಏನೆಂದರು ಗೊತ್ತೆ ?

ಸಾರಾಂಶ

ಚಾಮರಾಜನಗರ(ಸೆ.25): ಇಂದು ಚಾಮರಾಜನಗರದಲ್ಲಿ ನಡೆದ ವಿಶ್ವಕರ್ಮ ಜಯಂತೋತ್ಸವದಲ್ಲಿ ನಟ ಶಿವಣ್ಣನಿಗೆ ರಾಜಕೀಯ ಹ್ವಾನ ನೀಡಿದ ಇಬ್ಬರು ರಾಜಕೀಯ ಧುರೀಣರಿಗೆ ಶಿವಣ್ಣ ತಮ್ಮದೇ ಸ್ಟೈಲ್'ನಲ್ಲಿ ಉತ್ತರಿಸಿದ್ದಾರೆ.

ಆ ಇಬ್ಬರು ಧುರೀಣರಲ್ಲಿ ಒಬ್ಬರು ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಮತ್ತೊಬ್ಬರು ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ. ಗೃಹ ಸಚಿವ ಜಿ. ಪರಮೇಶ್ವರ್ ಅವರು, ಜನ ಮನ್ನಣೆ ಗಳಿಸುವುದು ಸುಲಭವಲ್ಲ, ಜನಮನ್ನಣೆ ಗಳಿಸಿದ್ದೀರಾ 

ಅದು ಸದುಪಯೋಗವಾಗಲು ರಾಜಕೀಯಕ್ಕೆ ಬರಬೇಕು ಎಂದು ಆಹ್ವಾನವಿತ್ತರು.

ಅದೇ ರೀತಿ ಸಿ.ಎಂ. ಇಬ್ರಾಹಿಂ ಸಹ ಶಿವಣ್ಣ ಅವರನ್ನು ನಟ ಶಿವರಾಜ್ ಕುಮಾರ್ ರಾಜಕೀಯಕ್ಕೆ ಬರಬೇಕು’. ಈ ಮೂಲಕ ಸಾರ್ವಜನಿಕರ ಸೇವೆಗೂ ಮುಂದಾಗಬೇಕು.‘ನಿಮ್ಮ ತಂದೆ ಮಾಡಿದ ತಪ್ಪನ್ನು ನೀವು ಮಾಡಬೇಡಿ’. ‘ರಾಜಕಾರಣಕ್ಕೆ ಆಗಮಿಸಿ, ಸಮಾಜಸೇವೆ ಮಾಡಿ ಎಂದರು.

ಇಬ್ಬರು ನಾಯಕರ ಮಾತನ್ನು ಕೇಳಿಸಿಕೊಂಡ ಶಿವಣ್ಣ ' ಜನಸೇವೆ ಮಾಡಲು ರಾಜಕೀಯಕ್ಕೆ ಬರಬೇಕಿಲ್ಲ. ನನಗೆ ಎಲ್ಲಾ ಪಕ್ಷಗಳಲ್ಲಿಯೂ ಅಭಿಮಾನಿಗಳಿದ್ದಾರೆ. ರಾಜಕೀಯಕ್ಕೆ ಬಂದು ಅಭಿಮಾನಿಗಳನ್ನು ಕಳೆದುಕೊಳ್ಳಲ್ಲ. ನೆಲ, ಜಲ, ಭಾಷೆ ವಿಷಯಕ್ಕೆ ಧಕ್ಕೆಯಾದರೆ ಜನರ ಜೊತೆ ಹೋರಾಟ ಮಾಡುತ್ತೇನೆ ಎಂದು ರಾಜಕೀಯ ಸೇರುವುದನ್ನು ನಯವಾಗಿ ತಿರಸ್ಕರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾಮಾಜಿಕ ಭದ್ರತಾ ಪಿಂಚಣಿಯಲ್ಲಿ 24.55 ಲಕ್ಷ ಅನುಮಾನಾಸ್ಪದ ಫಲಾನುಭವಿಗಳು: ಕೃಷ್ಣ ಬೈರೇಗೌಡ
ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ಸಿದ್ದರಾಮಯ್ಯ